<p><strong>ಹೊಸಕೋಟೆ:</strong> ನಗರದಲ್ಲಿ ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಹಿರಂಗ ಸಭೆ ಮಂಗಳವಾರ ನಡೆಯಿತು.</p>.<p>ಕೇಂದ್ರ ಸರ್ಕಾರದ 4 ಲೇಬರ್ ಕೋಡ್ಗಳ ರದ್ದತಿಗಾಗಿ ಮತ್ತು ರಾಜ್ಯದಲ್ಲೂ ಲೇಬರ್ ಕೋಡ್ಗಳ ಜಾರಿ ತಿರಸ್ಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವೈಜ್ಞಾನಿಕ ಕಾಯ್ದೆಗಳ ವಿರುದ್ಧ ಜಾಗೃತಿ ಮೂಡಿಸಲು ಆಟೋ ಮತ್ತು ಬೈಕ್ ರ್ಯಾಲಿ ನಡೆಯಿತು.</p>.<p>ವೊಲ್ವೋ ಕಂಪನಿಯ ಕಾರ್ಮಿಕ ಮುಖಂಡ ಆನಂದ್ ಮಾತನಾಡಿ, ದೇಶದಲ್ಲಿ 50 ಕೋಟಿಗೂ ಹೆಚ್ಚು ಕಾರ್ಮಿಕ ವರ್ಗವಿದೆ. ಇಂದು ಜಗತ್ತಿನಲ್ಲಿ ದೇಶವು 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ದೇಶದ ಆರ್ಥಿಕತೆಗೆ ಮುನ್ನುಡಿ ಬರೆಯಲು ಕಾರಣಕರ್ತರಾದ ಶ್ರಮಿಕರ ವಿರುದ್ಧವೇ ಮರಣ ಶಾಸನ ತರಲು ಹೊರಟಿರುವ ಕೇಂದ್ರ, ರಾಜ್ಯ ಸರ್ಕಾರಗಳನ್ನು ಏನೆಂದು ಕರೆಯಬೇಕು? ನಾವೇನು ಕಂಪನಿಗಳ ಲಾಭಾಂಶದಲ್ಲಿ ಪಾಲು ಕೇಳುತ್ತಿಲ್ಲ. ನಮ್ಮ ಬೆವರಿಗೆ ತಕ್ಕ ಪ್ರತಿಫಲ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.</p>.<p>ರಾಜ್ಯ ರೈತ ಸೇನೆ ತಾಲ್ಲೂಕು ಅಧ್ಯಕ್ಷ ಹೈದರ್ ಬೇಗ್ ಮಾತನಾಡಿ, ಬೀಜ ಮಸೂದೆ, ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತನೇ ಸಂಪೂರ್ಣ ವೆಚ್ಚ ಭರಿಸುವ ಕಾಯ್ದೆ, ವ್ಯವಸಾಯ ಭೂಮಿ ಖರೀದಿ ಹಕ್ಕಿನ ಬದಲಾವಣೆ, ಎಪಿಎಂಸಿ ಸ್ವರೂಪ ಬದಲಾವಣೆ ಹೀಗೆ ಒಂದಲ್ಲ ಎರಡಲ್ಲ ಹಲವು ಕಾನೂನುಗಳನ್ನು ಜಾರಿಗೆ ತರಲು ಹೊರಟಿರುವುದು ಅನ್ನದಾತನ ಬದುಕಿಗೆ ಕೊಳ್ಳಿ ಇಡುವಂತಹದ್ದಾಗಿದೆ. ದೇಶದ ಪ್ರಗತಿಗೆ ಬೆವರು ಸುರಿಸುತ್ತಿರುವ ಅನ್ನದಾತನ ಬೆವರನ್ನೇ ರಕ್ತದ ರೀತಿ ಹೀರಿಕೊಳ್ಳುತ್ತಿರುವ ಕ್ರಮ ಶೋಭೆ ತರುವಂತಹದ್ದಲ್ಲ ಎಂದು ಆಕ್ರೋಶಗೊಂಡರು.</p>.<p>ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಹರಿಂದ್ರ ಮಾತನಾಡಿ, ದೇಶದ ಬೆನ್ನೆಲುಬಾದ ರೈತ, ಕಾರ್ಮಿಕನ ಬೆನ್ನುಮೂಳೆಯನ್ನೇ ಮುರಿಯುವಂತಹ ಹುನ್ನಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗುತ್ತಿವೆ. ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನಗಳು ಬಂಡವಾಳಶಾಹಿಗಳ ಉದ್ದಾರಕ್ಕಲ್ಲ. ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಮತ್ತು ಘನತೆಯಿಂದ ಬದುಕುವ ವಾತಾವರಣ ಸಿಗುವಂತೆ ಮಾಡುವುದಾಗಿತ್ತು. ಆದರೆ ಇಂದು ಉಳ್ಳವನು ಮಾತ್ರ ಬದುಕಲು ಸಾಧ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.</p>.<p>ಅಂಗಡಿ ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತ ಬಂದ್ ಮಾಡಿ ಸಹಕರಿಸಿಲ್ಲ ಎಂದರೆ ಕಾರ್ಮಿಕರಿಗೆ ಆಗುತ್ತಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೂ ಕಾಲಿಡಲಿದೆ. ಮಾಲ್ಗಳ ಮುಂದೆ ಚಿಲ್ಲರೆ ವ್ಯಾಪಾರ ಪೈಪೋಟಿ ನೀಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದರು.</p>.<p>ಶ್ರಮಿಕ, ದಲಿತ, ಮಹಿಳೆ ತಲೆಯೆತ್ತಿ ಬದುಕುವ ವಾತಾವರಣ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ದೇಶದಲ್ಲಿ 50 ಕೋಟಿಗೂ ಹೆಚ್ಚಿರುವ ದುಡಿಯುವ ಶ್ರಮಿಕ ವರ್ಗ ಫೆ. 12 ಹೋರಾಟಕ್ಕೆ ಕೈಜೋಡಿಸಿದರೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಮುನ್ನುಡಿ ಆಗಬಲ್ಲದು ಎಂದರು.</p>.<p>ಹೋರಾಟದ ಭಾಗವಾಗಿ ಬುಧವಾರ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪದಾಧಿಕಾರಿಗಳು ತಿಳಿಸಿದರು.</p>.<p>ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನೇರವಾಗಿ ದೇಶದ ಸಂಪತ್ತು ದೋಚಿದರೆ ಇಂದು ಬಹುರಾಷ್ಟ್ರೀಯ ಕಂಪನಿಗಳು ದುಡಿವ ವರ್ಗದ ರಕ್ತವನ್ನು ಹೀರುವ ನವ ಬಂಡವಾಳಶಾಹಿ ವ್ಯವಸ್ಥೆ ತಲೆ ಎತ್ತಿದೆ. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಬಹುರಾಷ್ಟ್ರೀಯ ಕಂಪನಿಗಳೇ ದೇಶವನ್ನು ಆಳ್ವಿಕೆ ಮಾಡುವ ಸ್ಥಿತಿ ಬರಬಹುದು ಎಂದು ಡಿವೈಎಫ್ಐ ತಾಲ್ಲೂಕು ಮುಖಂಡ ಮೋಹನ್ ಬಾಬು ಹೇಳಿದರು.</p>.<div><blockquote>ಬೆಂಕಿ ನನ್ನ ಮನೆಗೆ ಬಿದ್ದಿದೆ ಎಂದು ಪಕ್ಕದ ಮನೆಯವ ಸುಮ್ಮನಿದ್ದರೆ ಮುಂದೆ ಅವನ ಮನೆಯನ್ನು ಸುಡುತ್ತದೆ ಎಂಬುದನ್ನು ಮರೆಯುತ್ತಿದ್ದೇವೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡದೇ ಸುಮ್ಮನಿದ್ದರೆ ನಮ್ಮ ಅಂತ್ಯ ಖಚಿತ.</blockquote><span class="attribution">– ಸಮೀರ್, ಆಮ್ ಆದ್ಮಿ ಪಕ್ಷದ ತಾಲ್ಲೂಕು ಮುಖಂಡ</span></div>
<p><strong>ಹೊಸಕೋಟೆ:</strong> ನಗರದಲ್ಲಿ ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಹಿರಂಗ ಸಭೆ ಮಂಗಳವಾರ ನಡೆಯಿತು.</p>.<p>ಕೇಂದ್ರ ಸರ್ಕಾರದ 4 ಲೇಬರ್ ಕೋಡ್ಗಳ ರದ್ದತಿಗಾಗಿ ಮತ್ತು ರಾಜ್ಯದಲ್ಲೂ ಲೇಬರ್ ಕೋಡ್ಗಳ ಜಾರಿ ತಿರಸ್ಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವೈಜ್ಞಾನಿಕ ಕಾಯ್ದೆಗಳ ವಿರುದ್ಧ ಜಾಗೃತಿ ಮೂಡಿಸಲು ಆಟೋ ಮತ್ತು ಬೈಕ್ ರ್ಯಾಲಿ ನಡೆಯಿತು.</p>.<p>ವೊಲ್ವೋ ಕಂಪನಿಯ ಕಾರ್ಮಿಕ ಮುಖಂಡ ಆನಂದ್ ಮಾತನಾಡಿ, ದೇಶದಲ್ಲಿ 50 ಕೋಟಿಗೂ ಹೆಚ್ಚು ಕಾರ್ಮಿಕ ವರ್ಗವಿದೆ. ಇಂದು ಜಗತ್ತಿನಲ್ಲಿ ದೇಶವು 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ದೇಶದ ಆರ್ಥಿಕತೆಗೆ ಮುನ್ನುಡಿ ಬರೆಯಲು ಕಾರಣಕರ್ತರಾದ ಶ್ರಮಿಕರ ವಿರುದ್ಧವೇ ಮರಣ ಶಾಸನ ತರಲು ಹೊರಟಿರುವ ಕೇಂದ್ರ, ರಾಜ್ಯ ಸರ್ಕಾರಗಳನ್ನು ಏನೆಂದು ಕರೆಯಬೇಕು? ನಾವೇನು ಕಂಪನಿಗಳ ಲಾಭಾಂಶದಲ್ಲಿ ಪಾಲು ಕೇಳುತ್ತಿಲ್ಲ. ನಮ್ಮ ಬೆವರಿಗೆ ತಕ್ಕ ಪ್ರತಿಫಲ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.</p>.<p>ರಾಜ್ಯ ರೈತ ಸೇನೆ ತಾಲ್ಲೂಕು ಅಧ್ಯಕ್ಷ ಹೈದರ್ ಬೇಗ್ ಮಾತನಾಡಿ, ಬೀಜ ಮಸೂದೆ, ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತನೇ ಸಂಪೂರ್ಣ ವೆಚ್ಚ ಭರಿಸುವ ಕಾಯ್ದೆ, ವ್ಯವಸಾಯ ಭೂಮಿ ಖರೀದಿ ಹಕ್ಕಿನ ಬದಲಾವಣೆ, ಎಪಿಎಂಸಿ ಸ್ವರೂಪ ಬದಲಾವಣೆ ಹೀಗೆ ಒಂದಲ್ಲ ಎರಡಲ್ಲ ಹಲವು ಕಾನೂನುಗಳನ್ನು ಜಾರಿಗೆ ತರಲು ಹೊರಟಿರುವುದು ಅನ್ನದಾತನ ಬದುಕಿಗೆ ಕೊಳ್ಳಿ ಇಡುವಂತಹದ್ದಾಗಿದೆ. ದೇಶದ ಪ್ರಗತಿಗೆ ಬೆವರು ಸುರಿಸುತ್ತಿರುವ ಅನ್ನದಾತನ ಬೆವರನ್ನೇ ರಕ್ತದ ರೀತಿ ಹೀರಿಕೊಳ್ಳುತ್ತಿರುವ ಕ್ರಮ ಶೋಭೆ ತರುವಂತಹದ್ದಲ್ಲ ಎಂದು ಆಕ್ರೋಶಗೊಂಡರು.</p>.<p>ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಹರಿಂದ್ರ ಮಾತನಾಡಿ, ದೇಶದ ಬೆನ್ನೆಲುಬಾದ ರೈತ, ಕಾರ್ಮಿಕನ ಬೆನ್ನುಮೂಳೆಯನ್ನೇ ಮುರಿಯುವಂತಹ ಹುನ್ನಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗುತ್ತಿವೆ. ಸ್ವಾತಂತ್ರ್ಯದ ಹಿಂದಿನ ತ್ಯಾಗ ಬಲಿದಾನಗಳು ಬಂಡವಾಳಶಾಹಿಗಳ ಉದ್ದಾರಕ್ಕಲ್ಲ. ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಮತ್ತು ಘನತೆಯಿಂದ ಬದುಕುವ ವಾತಾವರಣ ಸಿಗುವಂತೆ ಮಾಡುವುದಾಗಿತ್ತು. ಆದರೆ ಇಂದು ಉಳ್ಳವನು ಮಾತ್ರ ಬದುಕಲು ಸಾಧ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.</p>.<p>ಅಂಗಡಿ ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತ ಬಂದ್ ಮಾಡಿ ಸಹಕರಿಸಿಲ್ಲ ಎಂದರೆ ಕಾರ್ಮಿಕರಿಗೆ ಆಗುತ್ತಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೂ ಕಾಲಿಡಲಿದೆ. ಮಾಲ್ಗಳ ಮುಂದೆ ಚಿಲ್ಲರೆ ವ್ಯಾಪಾರ ಪೈಪೋಟಿ ನೀಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದರು.</p>.<p>ಶ್ರಮಿಕ, ದಲಿತ, ಮಹಿಳೆ ತಲೆಯೆತ್ತಿ ಬದುಕುವ ವಾತಾವರಣ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ದೇಶದಲ್ಲಿ 50 ಕೋಟಿಗೂ ಹೆಚ್ಚಿರುವ ದುಡಿಯುವ ಶ್ರಮಿಕ ವರ್ಗ ಫೆ. 12 ಹೋರಾಟಕ್ಕೆ ಕೈಜೋಡಿಸಿದರೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಮುನ್ನುಡಿ ಆಗಬಲ್ಲದು ಎಂದರು.</p>.<p>ಹೋರಾಟದ ಭಾಗವಾಗಿ ಬುಧವಾರ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪದಾಧಿಕಾರಿಗಳು ತಿಳಿಸಿದರು.</p>.<p>ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನೇರವಾಗಿ ದೇಶದ ಸಂಪತ್ತು ದೋಚಿದರೆ ಇಂದು ಬಹುರಾಷ್ಟ್ರೀಯ ಕಂಪನಿಗಳು ದುಡಿವ ವರ್ಗದ ರಕ್ತವನ್ನು ಹೀರುವ ನವ ಬಂಡವಾಳಶಾಹಿ ವ್ಯವಸ್ಥೆ ತಲೆ ಎತ್ತಿದೆ. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಬಹುರಾಷ್ಟ್ರೀಯ ಕಂಪನಿಗಳೇ ದೇಶವನ್ನು ಆಳ್ವಿಕೆ ಮಾಡುವ ಸ್ಥಿತಿ ಬರಬಹುದು ಎಂದು ಡಿವೈಎಫ್ಐ ತಾಲ್ಲೂಕು ಮುಖಂಡ ಮೋಹನ್ ಬಾಬು ಹೇಳಿದರು.</p>.<div><blockquote>ಬೆಂಕಿ ನನ್ನ ಮನೆಗೆ ಬಿದ್ದಿದೆ ಎಂದು ಪಕ್ಕದ ಮನೆಯವ ಸುಮ್ಮನಿದ್ದರೆ ಮುಂದೆ ಅವನ ಮನೆಯನ್ನು ಸುಡುತ್ತದೆ ಎಂಬುದನ್ನು ಮರೆಯುತ್ತಿದ್ದೇವೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡದೇ ಸುಮ್ಮನಿದ್ದರೆ ನಮ್ಮ ಅಂತ್ಯ ಖಚಿತ.</blockquote><span class="attribution">– ಸಮೀರ್, ಆಮ್ ಆದ್ಮಿ ಪಕ್ಷದ ತಾಲ್ಲೂಕು ಮುಖಂಡ</span></div>