‘ನಗರ ಪ್ರದೇಶದಲ್ಲಿ ನಮ್ಮನ್ನು ನಂಬಿಕೊಂಡು ಯಾವುದೇ ರೀತಿಯ ಸಾಕುಪ್ರಾಣಿಗಳು ಇರುವುದಿಲ್ಲ. ಹೀಗಾಗಿ ಮನೆಯಿಂದ ಹೊರ ಹೋಗದೆ ಇದ್ದರೂ ತೊಂದರೆ ಇಲ್ಲ. ಆದರೆ, ಗ್ರಾಮಗಳಲ್ಲಿನ ರೈತರ ಮನೆಯಲ್ಲಿ ದನ,ಕರು,ಮೇಕೆಗಳಿಗೆ ಹೊಲಕ್ಕೆ ಹೋಗಿ ಮೇವು ತಂದು ಹಾಕುವುದು ಕಷ್ಟವಾಗುತ್ತದೆ ಎನ್ನುವ ಉಜ್ಜನಿ ಗ್ರಾಮದ ಗಂಗಾಧರಪ್ಪ, ಈಗ ಮಳೆಗಾಲ ಆರಂಭವಾಗಿದೆ. ಗ್ರಾಮದಲ್ಲಿ ಯಾರಿಗಾದರೂ ಕೋವಿಡ್ ದೃಢಪಟ್ಟರೆ ಕೃಷಿ ಕೆಲಸವೇ ನಿಂತು ಹೋಗುತ್ತದೆ. ಈ ಹಿಂದೆ ಗ್ರಾಮದಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ತಿಳಿಯುತ್ತಿದ್ದಂತೆ ಇಡೀ ಬೀದಿಯನ್ನು ಬಂದ್ ಮಾಡಲಾಗಿತ್ತು. ಆ ಸಮಯದಲ್ಲಿ ಇನ್ನು ಮಳೆಗಾಲ ಆರಂಭವಾಗಿರಲಿಲ್ಲ. ಈಗ ಮಳೆಯಾಗುತ್ತಿದ್ದು ರಾಗಿ,ಜೋಳ ಬಿತ್ತನೆ ಮಾಡಲಾಗಿದೆ. ಹೊಲದಲ್ಲಿ ಕೆಲಸವು ಹೆಚ್ಚಾಗಿದೆ ಹೀಗಾಗಿ ಹೊಲದಲ್ಲೇ ವಾಸ ಅನಿವಾರ್ಯ’ ಎಂದರು.