<p><strong>ದೊಡ್ಡಬಳ್ಳಾಪುರ</strong>: ದನದ ಮಾಂಸ ಸಾಗಿಸುತ್ತಿದ್ದ ವಾಹನ ಚಾಲಕರ ಮೇಲೆ ಹಲ್ಲೆ ನಡೆಸಿದ ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರ ವಿರುದ್ಧ ಸೋಮವಾರ ಡಕಾಯಿತಿ ಪ್ರಕರಣ ದಾಖಲಾಗಿದೆ. </p>.<p>ಘಟನೆ ನಡೆದ ದಿನ ಆ ಮಾರ್ಗವಾಗಿ ಹೊರಟಿದ್ದ ಬೇರೊಂದು ವಾಹನವನ್ನು ಸಂಘಟನೆಯ ಕಾರ್ಯಕರ್ತರು ಅಡ್ಡಗಟ್ಟಿ ಹಣ ದೋಚಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. </p>.<p>ಕರ್ನೂಲ್ನ ಕೃಷ್ಣ ಐಸ್ ಕ್ರೀಂ ತಯಾರಿಕೆ ಘಟಕದಿಂದ ಭಾನುವಾರ ಬೆಳಗಿನ ಜಾವ ಐಸ್ ಕ್ರೀಂ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಶ್ರೀರಾಮಸೇನೆ ಕಾರ್ಯಕರ್ತರು ಪಾಲನಜೋಗಿಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ವಾಹನ ಜಖಂಗೊಳಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ₹90 ಸಾವಿರ ನಗದು ದೋಚಿದ್ದಾರೆ.</p>.<p>ಈ ಬಗ್ಗೆ ಐಸ್ಕ್ರೀಂ ವಾಹನ ಚಾಲಕ ಕಿಶನ್ ಲಾಲ್ ಜಾಟ್ ದೂರು ನೀಡಿದ್ದಾರೆ. ಪೊಲೀಸರು ತೋರಿಸಿದ ಫೋಟೊ ಮತ್ತು ವಿಡಿಯೊಗಳಲ್ಲಿರುವ ಶ್ರೀರಾಮ ಸೇನೆಯ ಮಂಜು ನಾಯ್ಕ, ದೇವರಾಜ್, ಪವನ್ ಹಾಗೂ ಪುನೀತ್ ಎಂಬುವರನ್ನು ಚಾಲಕ ಗುರುತಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ</strong>: ದನದ ಮಾಂಸ ಸಾಗಿಸುತ್ತಿದ್ದ ವಾಹನ ಚಾಲಕರ ಮೇಲೆ ಹಲ್ಲೆ ನಡೆಸಿದ ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರ ವಿರುದ್ಧ ಸೋಮವಾರ ಡಕಾಯಿತಿ ಪ್ರಕರಣ ದಾಖಲಾಗಿದೆ. </p>.<p>ಘಟನೆ ನಡೆದ ದಿನ ಆ ಮಾರ್ಗವಾಗಿ ಹೊರಟಿದ್ದ ಬೇರೊಂದು ವಾಹನವನ್ನು ಸಂಘಟನೆಯ ಕಾರ್ಯಕರ್ತರು ಅಡ್ಡಗಟ್ಟಿ ಹಣ ದೋಚಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. </p>.<p>ಕರ್ನೂಲ್ನ ಕೃಷ್ಣ ಐಸ್ ಕ್ರೀಂ ತಯಾರಿಕೆ ಘಟಕದಿಂದ ಭಾನುವಾರ ಬೆಳಗಿನ ಜಾವ ಐಸ್ ಕ್ರೀಂ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಶ್ರೀರಾಮಸೇನೆ ಕಾರ್ಯಕರ್ತರು ಪಾಲನಜೋಗಿಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ವಾಹನ ಜಖಂಗೊಳಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ₹90 ಸಾವಿರ ನಗದು ದೋಚಿದ್ದಾರೆ.</p>.<p>ಈ ಬಗ್ಗೆ ಐಸ್ಕ್ರೀಂ ವಾಹನ ಚಾಲಕ ಕಿಶನ್ ಲಾಲ್ ಜಾಟ್ ದೂರು ನೀಡಿದ್ದಾರೆ. ಪೊಲೀಸರು ತೋರಿಸಿದ ಫೋಟೊ ಮತ್ತು ವಿಡಿಯೊಗಳಲ್ಲಿರುವ ಶ್ರೀರಾಮ ಸೇನೆಯ ಮಂಜು ನಾಯ್ಕ, ದೇವರಾಜ್, ಪವನ್ ಹಾಗೂ ಪುನೀತ್ ಎಂಬುವರನ್ನು ಚಾಲಕ ಗುರುತಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>