ಪುರಸಭಾ ಎಂಜಿನಿಯರ್ ಸುಪ್ರಿಯಾರಾಣಿ ಮಾತನಾಡಿ, ‘ಇಹಪರದ ನಡುವಿನ ಹೋರಾಟದಲ್ಲಿ ನಾವು ಸತ್ಯದ ಹಾದಿಯಲ್ಲಿ ನಡೆದು ಜಯ ಗಳಿಸಿಕೊಳ್ಳಬೇಕಾಗಿದೆ. ನ್ಯಾಯ, ನೀತಿ, ಧರ್ಮ, ಸತ್ಯ, ಪ್ರೀತಿಯೆಂಬ ಅಸ್ತ್ರಗಳನ್ನು ನಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡು ಹೋರಾಟ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಈ ಸತ್ಯವನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಬೇಕಾಗಿದೆ’ ಎಂದರು.