ಹಾರೋಹಳ್ಳಿ (ಕನಕಪುರ): ಹಾರೋಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ – ಜೆಡಿಎಸ್ ಮುಖಂಡರು ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು.
ಸಂಸದ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸಿ ಅತಿ ಹೆಚ್ಚಿನ ಬಹುಮತ ನೀಡುವಂತೆ ಮತದಾರರಲ್ಲಿ ವಿನಂತಿಸಲಾಯಿತು. ಕುಡಿಯುವ ನೀರು, ಕೆರೆ ತುಂಬಿಸುವುದು, ರಸ್ತೆ ವಿಸ್ತರಣೆ, ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಕೆ.ನಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಕಂಠಯ್ಯ, ಮುಖಂಡರಾದ ಭುಜಂಗಯ್ಯ, ಎಂ.ಮಲ್ಲಪ್ಪ, ಹರೀಶ್ಕುಮಾರ್, ಮೂರ್ತಿ, ಶೇಖರ್, ಮೋಹನ್ಹೊಳ್ಳ, ಅಶೋಕ್, ಗುರುಪ್ರಸಾದ್, ನಿಯಾಮತ್, ದಿನೇಶ್, ಮಲ್ಲಯ್ಯ, ಬಾಲಾಜಿ, ಸೋಮಣ್ಣ, ಜಗದೀಶ್ಗೌಡ ಇದ್ದರು.