<p><strong>ದೇವನಹಳ್ಳಿ:</strong> ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಸೇರ್ಪಡೆ ಮಾಡುವ ಸಲುವಾಗಿ ಮಂಗಳವಾರ ಪೊಲೀಸ್ ಅಧೀಕ್ಷಕರ ಕಚೇರಿ ಸಂಬಂಧಪಟ್ಟ ಠಾಣೆ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ.</p>.<p>ದೇವನಹಳ್ಳಿ ವ್ಯಾಪ್ತಿಯ ಚನ್ನರಾಯಪಟ್ಟಣ ಪೊಲೀಸ್ ಠಾಣೆ, ವಿಶ್ವನಾಥಪುರ ಪೊಲೀಸ್ ಠಾಣೆ, ಸಮೀಪದ ರಾಜಾನುಕುಂಟೆ ಪೊಲೀಸ್ ಠಾಣೆ ಮಾಹಿತಿ ತಲುಪಿಸುವಂತೆ ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ಪತ್ರ ರವಾನೆಯಾಗಿದೆ.</p>.<p>ಹೊಸಕೋಟೆ ಭಾಗದ ಅವಲಹಳ್ಳಿ ಪೊಲೀಸ್ ಠಾಣೆ, ಆನೇಕಲ್ ವಿಭಾಗದ ಹೆಬ್ಬಗೋಡಿ, ಸೂರ್ಯನಗರ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ತರುವ ಪ್ರಸ್ತಾಪ ಇದಾಗಿದೆ.</p>.<p>ನೆಲಮಂಗಲ ವ್ಯಾಪ್ತಿಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯನ್ನು ನಗರ ಪೊಲೀಸರ ವ್ಯಾಪ್ತಿಗೆ ತರುವ ಬಗ್ಗೆ ಉಲ್ಲೇಖವಿದೆ. ಈ ಠಾಣೆಗಳಲ್ಲಿ 2021ರಿಂದ ನಡೆದಿರುವ ಅಪರಾಧ ಪ್ರಕರಣ ಕುರಿತಾದ ಮಾಹಿತಿ, ಠಾಣೆಯ ವ್ಯಾಪ್ತಿ ಹಾಗೂ ಜನಸಂಖ್ಯೆ ಕುರಿತು ಮಾಹಿತಿಯನ್ನು ಕೇಳಲಾಗಿದೆ.</p>.<p>ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕಠಿಣ ಕಾನೂನು ಹೇರಿಕೆಯಿಂದ ಬೇಸತ್ತು ಮತ್ತೆ ಈ ಠಾಣೆಯನ್ನು ಜಿಲ್ಲಾ ಎಸ್.ಪಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು. </p>.<p>ಈ ಕುರಿತು ಇಲಾಖೆ ವರದಿ ಸಿದ್ಧವಾಗಿ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಕೆಯಾಗಿ ಸರ್ಕಾರದ ಹಂತದಲ್ಲಿ ಬಾಕಿ ಇತ್ತು. ಈಗ ಒಮ್ಮೆಲೆಗೆ ಜಿಲ್ಲಾ ಎಸ್.ಪಿ ವ್ಯಾಪ್ತಿಗೆ 7 ಪೊಲೀಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸೇರ್ಪಡೆ ಮಾಡಲು ಇಲಾಖೆ ಸಜ್ಜಾಗುತ್ತಿದೆ.</p>.<p><strong> ವೇತನದಲ್ಲಿ ತಾರತಮ್ಯ: </strong>ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ನೇಮಕವಾಗಿರುವ ಪೊಲೀಸರಿಗೆ ಈಗಾಗಲೇ ವೇತನದಲ್ಲಿ ತಾರತಮ್ಯ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿ ಹೊರತಾಗಿ ಇರುವ ಇತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಗೃಹ ಭತ್ಯೆಯಲ್ಲಿ ಕಡಿತವಾಗಿ ಎರಡು ವರ್ಷವೇ ಕಳೆದಿದೆ.</p>.<p>ಶಾಂತಿ ಸುವ್ಯವಸ್ಥೆ ಕಾಪಾಡುವ ಇಲಾಖೆ ಸಿಬ್ಬಂದಿಗೆ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆಯಾದರೆ ಅವರ ಸಂಬಳದಲ್ಲಿ ಕಡಿತವಾಗಲಿದೆ. ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ ಎಂಬ ಮಾತುಗಳು ಕೇಳಿ ಬಂದಿದೆ. ಪುನಃ 7 ಗ್ರಾಮಾಂತರ ಪೊಲೀಸ್ ಠಾಣೆಯನ್ನು ನಗರ ವ್ಯಾಪ್ತಿಗೆ ತಂದರೆ ಅಲ್ಲಿಗೆ ವರ್ಗಾವಣೆಯಾಗುವವರಿಗೂ ವೇತನ ತಾರತಮ್ಯ ಆಗುವ ಸಾಧ್ಯತೆ ಇದೆ ಎನ್ನುವ ಆರೋಪವೂ ಇದೆ. </p>.<p><strong>ಬೆಂಗಳೂರು ನಗರ ವ್ಯಾಪ್ತಿಗೆ ಬರಲಿರುವ ಠಾಣೆಗಳು</strong></p>.<p><strong>ದೊಡ್ಡಬಳ್ಳಾಪುರ ಉಪ ವಿಭಾಗ</strong></p>.<p>1. ರಾಜಾನುಕುಂಟೆ ಪೊಲೀಸ್ ಠಾಣೆ</p>.<p>2. ವಿಶ್ವನಾಥಪುರ ಪೊಲೀಸ್ ಠಾಣೆ</p>.<p>3. ಚನ್ನರಾಯಪಟ್ಟಣ ಪೊಲೀಸ್ ಠಾಣೆ</p>.<p><strong>ಹೊಸಕೋಟೆ ಉಪ ವಿಭಾಗ</strong></p>.<p>1. ಅವಲಹಳ್ಳಿ ಪೊಲೀಸ್ ಠಾಣೆ</p>.<p><strong>ಆನೇಕಲ್ ಉಪ ವಿಭಾಗ</strong></p>.<p>1. ಹೆಬ್ಬಗೋಡಿ ಪೊಲೀಸ್ ಠಾಣೆ</p>.<p>2. ಸೂರ್ಯ ನಗರ ಪೊಲೀಸ್ ಠಾಣೆ</p>.<p><strong>ನೆಲಮಂಗಲ ಉಪ ವಿಭಾಗ</strong></p>.<p>1. ಮಾದನಾಯಕನಹಳ್ಳಿ ಪೊಲೀಸ್ ಠಾಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಸೇರ್ಪಡೆ ಮಾಡುವ ಸಲುವಾಗಿ ಮಂಗಳವಾರ ಪೊಲೀಸ್ ಅಧೀಕ್ಷಕರ ಕಚೇರಿ ಸಂಬಂಧಪಟ್ಟ ಠಾಣೆ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ.</p>.<p>ದೇವನಹಳ್ಳಿ ವ್ಯಾಪ್ತಿಯ ಚನ್ನರಾಯಪಟ್ಟಣ ಪೊಲೀಸ್ ಠಾಣೆ, ವಿಶ್ವನಾಥಪುರ ಪೊಲೀಸ್ ಠಾಣೆ, ಸಮೀಪದ ರಾಜಾನುಕುಂಟೆ ಪೊಲೀಸ್ ಠಾಣೆ ಮಾಹಿತಿ ತಲುಪಿಸುವಂತೆ ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ಪತ್ರ ರವಾನೆಯಾಗಿದೆ.</p>.<p>ಹೊಸಕೋಟೆ ಭಾಗದ ಅವಲಹಳ್ಳಿ ಪೊಲೀಸ್ ಠಾಣೆ, ಆನೇಕಲ್ ವಿಭಾಗದ ಹೆಬ್ಬಗೋಡಿ, ಸೂರ್ಯನಗರ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ತರುವ ಪ್ರಸ್ತಾಪ ಇದಾಗಿದೆ.</p>.<p>ನೆಲಮಂಗಲ ವ್ಯಾಪ್ತಿಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯನ್ನು ನಗರ ಪೊಲೀಸರ ವ್ಯಾಪ್ತಿಗೆ ತರುವ ಬಗ್ಗೆ ಉಲ್ಲೇಖವಿದೆ. ಈ ಠಾಣೆಗಳಲ್ಲಿ 2021ರಿಂದ ನಡೆದಿರುವ ಅಪರಾಧ ಪ್ರಕರಣ ಕುರಿತಾದ ಮಾಹಿತಿ, ಠಾಣೆಯ ವ್ಯಾಪ್ತಿ ಹಾಗೂ ಜನಸಂಖ್ಯೆ ಕುರಿತು ಮಾಹಿತಿಯನ್ನು ಕೇಳಲಾಗಿದೆ.</p>.<p>ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕಠಿಣ ಕಾನೂನು ಹೇರಿಕೆಯಿಂದ ಬೇಸತ್ತು ಮತ್ತೆ ಈ ಠಾಣೆಯನ್ನು ಜಿಲ್ಲಾ ಎಸ್.ಪಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು. </p>.<p>ಈ ಕುರಿತು ಇಲಾಖೆ ವರದಿ ಸಿದ್ಧವಾಗಿ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಕೆಯಾಗಿ ಸರ್ಕಾರದ ಹಂತದಲ್ಲಿ ಬಾಕಿ ಇತ್ತು. ಈಗ ಒಮ್ಮೆಲೆಗೆ ಜಿಲ್ಲಾ ಎಸ್.ಪಿ ವ್ಯಾಪ್ತಿಗೆ 7 ಪೊಲೀಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸೇರ್ಪಡೆ ಮಾಡಲು ಇಲಾಖೆ ಸಜ್ಜಾಗುತ್ತಿದೆ.</p>.<p><strong> ವೇತನದಲ್ಲಿ ತಾರತಮ್ಯ: </strong>ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ನೇಮಕವಾಗಿರುವ ಪೊಲೀಸರಿಗೆ ಈಗಾಗಲೇ ವೇತನದಲ್ಲಿ ತಾರತಮ್ಯ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿ ಹೊರತಾಗಿ ಇರುವ ಇತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಗೃಹ ಭತ್ಯೆಯಲ್ಲಿ ಕಡಿತವಾಗಿ ಎರಡು ವರ್ಷವೇ ಕಳೆದಿದೆ.</p>.<p>ಶಾಂತಿ ಸುವ್ಯವಸ್ಥೆ ಕಾಪಾಡುವ ಇಲಾಖೆ ಸಿಬ್ಬಂದಿಗೆ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆಯಾದರೆ ಅವರ ಸಂಬಳದಲ್ಲಿ ಕಡಿತವಾಗಲಿದೆ. ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ ಎಂಬ ಮಾತುಗಳು ಕೇಳಿ ಬಂದಿದೆ. ಪುನಃ 7 ಗ್ರಾಮಾಂತರ ಪೊಲೀಸ್ ಠಾಣೆಯನ್ನು ನಗರ ವ್ಯಾಪ್ತಿಗೆ ತಂದರೆ ಅಲ್ಲಿಗೆ ವರ್ಗಾವಣೆಯಾಗುವವರಿಗೂ ವೇತನ ತಾರತಮ್ಯ ಆಗುವ ಸಾಧ್ಯತೆ ಇದೆ ಎನ್ನುವ ಆರೋಪವೂ ಇದೆ. </p>.<p><strong>ಬೆಂಗಳೂರು ನಗರ ವ್ಯಾಪ್ತಿಗೆ ಬರಲಿರುವ ಠಾಣೆಗಳು</strong></p>.<p><strong>ದೊಡ್ಡಬಳ್ಳಾಪುರ ಉಪ ವಿಭಾಗ</strong></p>.<p>1. ರಾಜಾನುಕುಂಟೆ ಪೊಲೀಸ್ ಠಾಣೆ</p>.<p>2. ವಿಶ್ವನಾಥಪುರ ಪೊಲೀಸ್ ಠಾಣೆ</p>.<p>3. ಚನ್ನರಾಯಪಟ್ಟಣ ಪೊಲೀಸ್ ಠಾಣೆ</p>.<p><strong>ಹೊಸಕೋಟೆ ಉಪ ವಿಭಾಗ</strong></p>.<p>1. ಅವಲಹಳ್ಳಿ ಪೊಲೀಸ್ ಠಾಣೆ</p>.<p><strong>ಆನೇಕಲ್ ಉಪ ವಿಭಾಗ</strong></p>.<p>1. ಹೆಬ್ಬಗೋಡಿ ಪೊಲೀಸ್ ಠಾಣೆ</p>.<p>2. ಸೂರ್ಯ ನಗರ ಪೊಲೀಸ್ ಠಾಣೆ</p>.<p><strong>ನೆಲಮಂಗಲ ಉಪ ವಿಭಾಗ</strong></p>.<p>1. ಮಾದನಾಯಕನಹಳ್ಳಿ ಪೊಲೀಸ್ ಠಾಣೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>