ದೊಡ್ಡಬಳ್ಳಾಪುರ: ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಸಮಯದಲ್ಲಿ ಭಾನುವಾರ ನಗರದ ಬಾರ್ವೊಂದರ ಸಮೀಪ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಬಿಡಿಸಿದ್ದ ಯುವಕನ ಮೇಲೆ ವೈಷಮ್ಯ ಸಾಧಿಸಿ, ಬುಧವಾರ ಸಂಜೆ ಅದೇ ಸ್ಥಳಕ್ಕೆ ಕರೆಯಿಸಿಕೊಂಡು ಆತನ ಮೇಲೆ ನಾಲ್ವರು ದುಷ್ಕರ್ಮಿಗಳು ಲಾಂಗ್ಗಳಿಂದ ಹಲ್ಲೆ ನಡೆಸಿದ್ದಾರೆ.