ಮಂಗಳವಾರ ಒಂದೇ ರಾತ್ರಿಗೆ 74 ಮಿಲಿಮೀಟರ್ ಮಳೆಯಾಗಿದೆ. ನಗರದಲ್ಲಿನ ನಾಗರಕೆರೆ, ಮುತ್ತೂರು ಕೆರೆಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ನಗರಸಭೆ ವ್ಯಾಪ್ತಿಯ ಭುವನೇಶ್ವರಿನಗರ, ಚೈತನ್ಯನಗರ ಸೇರಿದಂತೆ ಹಲವೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ತಗ್ಗುಪ್ರದೇಶದ ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡುವಂತಾಗಿತ್ತು.