ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾಟಂನಲ್ಲೂರು ಗೇಟ್ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ

ವೆಂಕಟೇಶ್.ಡಿ.ಎನ್
Published : 30 ಸೆಪ್ಟೆಂಬರ್ 2024, 5:57 IST
Last Updated : 30 ಸೆಪ್ಟೆಂಬರ್ 2024, 5:57 IST
ಫಾಲೋ ಮಾಡಿ
Comments
ಕಾಮಗಾರಿಯ ಸಲುವಾಗಿ ಮಾಡಲಾಗಿರುವ ಸಂಚಾರ ತಿರುವು
ಕಾಮಗಾರಿಯ ಸಲುವಾಗಿ ಮಾಡಲಾಗಿರುವ ಸಂಚಾರ ತಿರುವು
ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ವಿದ್ಯಾರ್ಥಿಗಳಿಗೆ ಪಾದಚಾರಿಗಳಿಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಸಹ ಬಂದು ಕಾಮಗಾರಿಯನ್ನು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಈ ಸ್ಥಿತಿಯನ್ನು ಕಂಡ ಅವರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಹೇಳಿದ್ದರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಜಯರಾಂ ಸ್ಥಳೀಯರು ಕೋಡಿ ಹೊಸಕೋಟೆ
ಸ್ಥಳೀಯ ವಾಹನ ಓಡಾಟಕ್ಕೆ ಅಡಚಣೆ ನಿತ್ಯ ನಮ್ಮ ಮಕ್ಕಳನ್ನು ಹೊಸಕೋಟೆ ಶಾಲೆಗೆ ಕರೆದುಕೊಂಡು ಹೋಗುತ್ತೇವೆ. ಕಾಟಂನಲ್ಲೂರು ಕ್ರಾಸ್ ಬಳಿ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಕಾರಣದಿಂದ ದುಪ್ಪಟ್ಟು ವಾಹನ ದಟ್ಟಣೆ ಉಂಟಾಗುತ್ತದೆ. ಎರಡೂ ಬದಿಯಿಂದ ವಾಹನಗಳು ಸಂಚರಿಸುವುದರಿಂದ ಸ್ಥಳೀಯರ ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ.
ಅನಿತಾ ಗೃಹಿಣಿ ಹುಸ್ಕೂರು ಗ್ರಾಮ
ತ್ವರಿತಗತಿಯಲ್ಲಿ ಆರಂಭವಾದ ರಸ್ತೆ ಮೇಲ್ಸೇತುವೆ ಕಾಮಗಾರಿ ಏಕಾಏಕಿ ಸ್ಥಗಿತಗೊಳ್ಳಲು ಕಾರಣ ತಿಳಿಯುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಇದೊಂದು ಶುಭಸುದ್ದಿ ಎಂದು ಸಂತಸಪಟ್ಟುಕೊಳ್ಳುವುದೋ ಅಥವಾ ಸ್ಥಗಿತಗೊಂಡು ಸಂಚಾರಕ್ಕೆ ಮತ್ತಷ್ಟು ಸಮಸ್ಯೆ ತಂದೊಡ್ಡಿದ್ದಾರೆ ಎಂದು ದುಃಖಿಸುವುದೋ ಒಂದು ತಿಳಿಯದೆ ಆಯೋಮಯ ಸ್ಥಿತಿಯಲ್ಲಿದ್ದಾರೆ. ಮೇಲ್ಸೇತುವೆ ನನೆಗುದಿಗೆ ಬಿದ್ದಿರುವುದರಿಂದ ಸಂಚಾರ ಸಮಸ್ಯೆ ತೀವ್ರಗೊಂಡಿದೆ.
ಶ್ರೀನಿವಾಸ್ ಆಚಾರ್ ಹೊಸಕೋಟೆ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ನಿಗಸಲಿ
ಎಂ.ಮುನಿಸುಬ್ಬಯ್ಯ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT