<p><strong>ದೇವನಹಳ್ಳಿ</strong>: ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಮಹತ್ವದ ಕೊಡುಗೆ ಎಂದು ತಹಶೀಲ್ದಾರ್ ಎಂ.ಅನಿಲ್ ಹೇಳಿದರು.</p>.<p>ತಾಲ್ಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾ.ಪಂ ವತಿಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಮಾತನಾಡಿದರು.</p>.<p>ಕಾಯಕ ಶರಣರ ಆದರ್ಶಗಳನ್ನು ಪಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.</p>.<p>ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಸೇರಿದಂತೆ ಕಾಯಕ ಶರಣರು ತಮ್ಮ ಕಾಯಕದಿಂದಲೇ ಗುರುತಿಸಿಕೊಂಡವರು. ಕಾಯಕದ ಮೂಲಕವೇ ಅವರು ಕೈಲಾಸವನ್ನು ಕಂಡರು ಎಂದು ಹೇಳಿದರು.</p>.<p>ಕಾಯಕ ಶರಣರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಧಾರೆ ಹಾಗೂ ಅವರ ಬದುಕು–ಬರವಣಿಗೆಗಳ ನಡುವೆ ಸಾಮ್ಯತೆ ಕಂಡುಬರುತ್ತದೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ ಬದ್ಧತೆಯಿಂದ ಬದುಕು ನಡೆಸಿದ 12ನೇ ಶತಮಾನದ ಶರಣರ ನಡೆ–ನುಡಿಗಳು ಒಂದಾಗಿದ್ದವು ಎಂದು ತಿಳಿಸಿದರು.</p>.<p>12ನೇ ಶತಮಾನದ ವಚನ ಚಳವಳಿಯನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ. ಕಾಯಕ ಎಂದರೆ ಕೇವಲ ಜೀವನೋಪಾಯಕ್ಕಾಗಿ ಕೈಗೊಂಡ ವೃತ್ತಿಯಲ್ಲ; ಪ್ರತಿಯೊಂದು ವೃತ್ತಿಯನ್ನೂ ಗೌರವಯುತವಾಗಿ ಕಾಣುವುದೇ ಕಾಯಕ ಎಂದು ಅವರು ಹೇಳಿದರು. ಆ ಕಾಲಘಟ್ಟವು ಧಾರ್ಮಿಕ ಆಂದೋಲನದ ಜತೆಗೆ ಸಾಮಾಜಿಕ ಆಂದೋಲನಕ್ಕೂ ಸಾಕ್ಷಿಯಾಯಿತು. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಿಗೆ ಅವಕಾಶ ಕಲ್ಪಿಸಿದ ಮಹತ್ವದ ಯುಗವಾಗಿತ್ತು ಎಂದು ಹೇಳಿದರು.</p>.<p>ಶಿರಸ್ತೆದಾರ್ ಸಂತೋಷ್, ವಿಷಯ ನಿರ್ವಾಹಕ ಶ್ರೀನಿವಾಸ್ ಪ್ರಸಾದ್, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ಕಾಯಕ ಹಾಗೂ ದಾಸೋಹದ ಪರಿಕಲ್ಪನೆ 12ನೇ ಶತಮಾನದ ಶರಣರು ನೀಡಿದ ಮಹತ್ವದ ಕೊಡುಗೆ ಎಂದು ತಹಶೀಲ್ದಾರ್ ಎಂ.ಅನಿಲ್ ಹೇಳಿದರು.</p>.<p>ತಾಲ್ಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾ.ಪಂ ವತಿಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಮಾತನಾಡಿದರು.</p>.<p>ಕಾಯಕ ಶರಣರ ಆದರ್ಶಗಳನ್ನು ಪಾಲಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.</p>.<p>ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಸೇರಿದಂತೆ ಕಾಯಕ ಶರಣರು ತಮ್ಮ ಕಾಯಕದಿಂದಲೇ ಗುರುತಿಸಿಕೊಂಡವರು. ಕಾಯಕದ ಮೂಲಕವೇ ಅವರು ಕೈಲಾಸವನ್ನು ಕಂಡರು ಎಂದು ಹೇಳಿದರು.</p>.<p>ಕಾಯಕ ಶರಣರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಧಾರೆ ಹಾಗೂ ಅವರ ಬದುಕು–ಬರವಣಿಗೆಗಳ ನಡುವೆ ಸಾಮ್ಯತೆ ಕಂಡುಬರುತ್ತದೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ ಬದ್ಧತೆಯಿಂದ ಬದುಕು ನಡೆಸಿದ 12ನೇ ಶತಮಾನದ ಶರಣರ ನಡೆ–ನುಡಿಗಳು ಒಂದಾಗಿದ್ದವು ಎಂದು ತಿಳಿಸಿದರು.</p>.<p>12ನೇ ಶತಮಾನದ ವಚನ ಚಳವಳಿಯನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ. ಕಾಯಕ ಎಂದರೆ ಕೇವಲ ಜೀವನೋಪಾಯಕ್ಕಾಗಿ ಕೈಗೊಂಡ ವೃತ್ತಿಯಲ್ಲ; ಪ್ರತಿಯೊಂದು ವೃತ್ತಿಯನ್ನೂ ಗೌರವಯುತವಾಗಿ ಕಾಣುವುದೇ ಕಾಯಕ ಎಂದು ಅವರು ಹೇಳಿದರು. ಆ ಕಾಲಘಟ್ಟವು ಧಾರ್ಮಿಕ ಆಂದೋಲನದ ಜತೆಗೆ ಸಾಮಾಜಿಕ ಆಂದೋಲನಕ್ಕೂ ಸಾಕ್ಷಿಯಾಯಿತು. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಿಗೆ ಅವಕಾಶ ಕಲ್ಪಿಸಿದ ಮಹತ್ವದ ಯುಗವಾಗಿತ್ತು ಎಂದು ಹೇಳಿದರು.</p>.<p>ಶಿರಸ್ತೆದಾರ್ ಸಂತೋಷ್, ವಿಷಯ ನಿರ್ವಾಹಕ ಶ್ರೀನಿವಾಸ್ ಪ್ರಸಾದ್, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>