ಸಹ ಪ್ರಾಧ್ಯಾಪಕ ಡಾ. ಮಧುಸೂದನ ಜೋಶಿ ಮಾತನಾಡಿ, ‘ಕುವೆಂಪು ಸದಾ ಶೋಷಿತರ ಪರ ಧನಿ ಎತ್ತಿದ ಮಹಾನ್ ಕವಿ. ಅವರ ಎಲ್ಲ ನಾಟಕಗಳು ಕೂಡ ಶೋಷಿತರ ಧನಿಯಾಗಿವೆ. ಹಲವು ಪ್ರಥಮಗಳ ಮಹಾಪುರುಷರಾದ ಕುವೆಂಪು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು. ಕುವೆಂಪು ವಿರಚಿತ ಜಲಗಾರ ನಾಟಕವನ್ನು ಪ್ರದರ್ಶಿಸುತ್ತಿರುವುದು ಅರ್ಥಗರ್ಭಿತವಾಗಿದೆ’ ಎಂದರು.