ಪ್ರಸಾದ್ ಅವರ ಮನೆಯ ತಡೆಗೋಡೆ ಜಿಗಿದು ರಾತ್ರಿ 12.10ರ ಸುಮಾರಿನಲ್ಲಿ ಒಳ ಬಂದ ಚಿರತೆ ಮನೆಯ ಆವರಣದಲ್ಲಿ ಓಡಾಡಿದೆ. ಹಸು ಮತ್ತು ನಾಯಿ ಕಟ್ಟಿಹಾಕಲಾಗಿದ್ದ ಶೆಡ್ ಸುತ್ತಲೂ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿ.4ರಂದು ಪ್ರಸಾದ್ ಅವರ ಮನೆಯ ಬಳಿ ಬಂದಿದ್ದ ಚಿರತೆ ಸಾಕು ನಾಯಿಯೊಂದನ್ನು ಹೊತ್ತೊಯ್ದಿದೆ. ಒಂದು ವಾರದಲ್ಲಿ ಎರಡನೇ ಬಾರಿ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಕಾಡಿನಂಚಿಗೆ ತೆರಳುವ ಗ್ರಾಮಸ್ಥರಲ್ಲಿ ಚಿರತೆಯ ಓಡಾಟ ಭಯವನ್ನುಂಟು ಮಾಡಿದೆ. ಅರಣ್ಯ ಇಲಾಖೆ ಚಿರತೆ ನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರ ಒತ್ತಾಯಿಸಿದ್ದಾರೆ.