ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಸುಂದರೇಶ್, ಹಿರಿಯ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ‘ದೇಶ ಸೇವೆಯಲ್ಲಿ ತೊಡಗಿದವರು ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸಿದವರನ್ನು ಸಾಮಾಜಿಕ ಸೇವೆ ಮೂಲಕ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಚಿಂತನೆ ಮತ್ತು ದೃಷ್ಠಿಕೋನ ಅದ್ಭುತ, ದೇಶ ರಕ್ಷಣೆಯಲ್ಲಿ ಅವರ ಪಾತ್ರ ಅಸಾಧಾರಣವಾಗಿದೆ’ ಎಂದು ಹೇಳಿದರು.