‘ಪಕ್ಷದ ಕಾರ್ಯಕರ್ತರು ಎಂ.ಟಿ.ಬಿ. ನಾಗರಾಜ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದು 5 ವರ್ಷ ತಾಲ್ಲೂಕಿನ ಮತದಾರರ ಸೇವೆ ಮಾಡುವುದಕ್ಕಾಗಿ. ಆದರೆ ಅವರು ನಮ್ಮ ಯಾವುದೇ ತಾಲ್ಲೂಕು ಬ್ಲಾಕ್ ಕಾರ್ಯಕರ್ತರ ಜೊತೆ ಸಮಾಲೋಚಿಸದೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬಾರದಾಗಿತ್ತು. ನಮ್ಮದೇನಾದರೂ ತಪ್ಪುಗಳಿದ್ದರೆ ನಾವು ಅದನ್ನು ತಿದ್ದಿಕೊಳ್ಳುತ್ತಿದ್ದೆವು. ಆದರೂ ನಮಗೆ ಅವರ ಬಗ್ಗೆ ವಿಶ್ವಾಸವಿದ್ದು ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ವೀರಪ್ಪ ಮೊಯಿಲಿ ಅವರ ಮಾತಿಗೆ ಬೆಲೆ ಕೊಟ್ಟು ಅವರು ತಮ್ಮ ನಿರ್ಧಾರ ಬದಲಿಸುತ್ತಾರೆ’ ಎಂದರು.