ತಾಲ್ಲೂಕಿನ ಜಡಗೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಪಕ್ಷದಿಂದ ತಲಾ ₹ 2 ಕೋಟಿ ಕೊಟ್ಟಿದ್ದರು. ಆದರೆ, ನನಗೆ ಹಣ ಬಂದಿರಲಿಲ್ಲ. ಸಿದ್ದರಾಮಯ್ಯನವರನ್ನು ವಿಚಾರಿಸಿದಾಗ ಎಂಟಿಬಿ ನಾಗರಾಜ್ ಕೊಡುತ್ತಾರೆ ಎಂದರು. ಆಗ ನಾನು ನಾಗರಾಜ್ ಅವರಿಂದ ₹ 2 ಕೋಟಿ ಜತೆಗೆ ವೈಯಕ್ತಿಕವಾಗಿ ₹ 1 ಕೋಟಿ ಅವರಿಂದ ಪಡೆದಿದ್ದು ನಿಜ. ಆದರೆ ಚುನಾವಣೆ ಮುಗಿದ ವಾರದೊಳಗೆ ಆ ಹಣವನ್ನು ಅವರು ಕೊಟ್ಟ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದೆ ಎಂದರು.