ಗಾಯಕರಾದ ರಾಘವೇಂದ್ರ ಬಿಜಾಡಿ, ನಗರ ಶ್ರೀನಿವಾಸ ಉಡುಪ, ಪ್ರದೀಪ್, ಸೀಮಾ ರಾಯ್ಕರ್, ಪ್ರೇಮಲತಾ ದಿವಾಕರ್, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್, ನಿತಿನ್ ರಾಜಾರಾಮ್ ಶಾಸ್ತ್ರಿ, ಪಂಚಮ್ ಹಳಿಬಂಡಿ ಅವರು ಈ ಕವನಗಳಿಗೆ ದನಿಯಾದರು. ಕವಿ ಮತ್ತು ಗಾಯಕರ ಜುಗಲ್ ಬಂದಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.