ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮುನಿರಾಜು ಬಂಡಾಪುರದ ತಮ್ಮ ಮನೆ ಕಾಂಪೌಂಡ್ ಮೇಲೆ ಕೋಮು ಸೌಹಾರ್ದ ಕದಡುವ ಗೋಡೆ ಬರಹ ಇಂಗ್ಲಿಷ್ನಲ್ಲಿ ಬರೆದಿದ್ದರು. ಇದನ್ನು ಗಮನಿಸಿದ ರಾಜು ಎಂಬುವವರು ಇಂತಹ ಬರವಣಿಗೆ ಬರೆಯಬಾರದು ಅಳಿಸಿ ಹಾಕಿ ಎಂದು ಹೇಳಿದ್ದರು. ಆದರೆ, ಮುನಿರಾಜು ’ನನ್ನ ಜಾಗ ನನ್ನ ಮನೆ ನನ್ನ ಇಷ್ಟದಂತೆ ಬರೆಯುತ್ತೇನೆ’ ಎಂದು ತಿಳಿಸಿದ್ದರು. ಈ ಸಂಬಂಧ ಬಂಡಾಪುರ ಪಿ.ರಾಜು ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂರ್ಯಸಿಟಿ ಪೊಲೀಸರು ಮುನಿರಾಜು ವಿರುದ್ಧ ಪ್ರಕಣ ದಾಖಲಿಸಿಕೊಂಡಿದ್ದಾರೆ.