‘ಸಂಕಷ್ಟ ಸೂತ್ರವನ್ನು ವರ್ಷದ ಕೊನೆಯಲ್ಲಿ ನಿರ್ಧರಿಸುವ ಬದಲು, ಮಳೆ ಬೀಳುವ ತಿಂಗಳಿನ ನಂತರ ಮಳೆ ಬಿದ್ದ ಪ್ರಮಾಣಕ್ಕೆ ಅನುಗುಣವಾಗಿ ಸಂಕಷ್ಟ ಸೂತ್ರ ನಿಗದಿ ಮಾಡಬೇಕು. ಪರಸರ, ನೀರಿನ ಆವಿ ಹಾಗೂ ನೀರು ಪೋಲಾಗುವಿಕೆ, ನೀರನ್ನು ಕೇವಲ ತಮಿಳುನಾಡಿಗೆ ಬಿಡದೆ ನಮ್ಮ ರಾಜ್ಯಕ್ಕೂ ಸಮಪಾಲು ಕೇಳಬೇಕು. ರಾಜ್ಯಕ್ಕೆ ನ್ಯಾಯಯುತವಾಗಿ ಸಿಕ್ಕ ನೀರಿನಲ್ಲಿ ರೈತರು ಯಾವ ಬೆಳೆ ಬೆಳೆಯಬೇಕು ಎಂಬ ವಿಷಯದಲ್ಲಿ ಕೇಂದ್ರ ಹಾಗೂ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದರು.