ವಿವಿಧ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದ ಬೆದರಿಕೆಗೆ ಬೆದರುವುದಿಲ್ಲ. ಪೊಲೀಸರ ತಂತ್ರಗಾರಿಕೆಗಳಿಗೆ ಮಣಿಯುವುದಿಲ್ಲ. ಶತಾಯಗತಾಯ ಏನಾಗುತ್ತೋ ಆಗಲಿ. ಬೀದಿಗಿಳಿಯುವುದು ಶತಸಿದ್ಧ. ಸರ್ಕಾರ ನಮ್ಮ ಭೂಮಿಯನ್ನು ನಮಗೆ ಬಿಟ್ಟು ಕೊಡಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದು ಹೋರಾಟಗಾರ ಮಾರೇಗೌಡ ಆಗ್ರಹಿಸಿದರು.