ವಿಜಯಪುರ : ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಕೊಡಿಸಿದ್ದೀರಿ ಅವರಿಂದ ಸಾಲ ಮರು ಪಾವತಿಸುವವರೆಗೂ ಸಂಬಳ ಡ್ರಾ ಮಾಡಲು ಸಾಧ್ಯ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ ಎಂದು ಅಂಗವಾಡಿ ಶಿಕ್ಷಕಿ ಕಲಾವತಿ ಅವಲತ್ತುಕೊಂಡರೆ, ಶಾಲೆ ಆವರಣದಲ್ಲಿ ಶೌಚಾಲಯವಿಲ್ಲ, ಕೋತಿಗಳ ಹಾವಳಿ ಹೆಚ್ಚಾಗಿದೆ ಎಂದು ಶಿಕ್ಷಕ ದಿನೇಶ್ ಕುಮಾರ್ ದೂರಿದರು. ಹೀಗೆ; ಹಲವು ಸಮಸ್ಯೆಗಳನ್ನು ಗ್ರಾಮ ಸಭೆಯಲ್ಲಿ ತೆರೆದಿಟ್ಟರು.