ರೈತ ಮುಖಂಡ ಸೋಮಶೇಖರಪ್ಪ ಮಾತನಾಡಿ, ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿಪ್ಪುನೇರಳೆ ಸೊಪ್ಪಿನ ಬೆಲೆ ಈ ಮಟ್ಟಿಗೆ ಇಳಿಕೆ ಕಂಡಿದೆ. ಬಹಳ ಮಂದಿ ರೈತರು ಹಿಪ್ಪುನೇರಳೆ ಕಿತ್ತು ಹಾಕಿದ್ದರು. ಗೂಡಿನ ದರ ಹೆಚ್ಚಾದಾಗ ಪುನಃ ನಾಟಿ ಮಾಡಿ ಉತ್ತಮ ಬೆಳೆ ಬೆಳೆದರು. ಈಗ ಹಣ್ಣೆಲೆ ಬೀಳುತ್ತಿದೆ. ಹಣ್ಣೆಲೆ ಬಿದ್ದರೆ ದನಕರುಗಳೂ ತಿನ್ನುವುದಿಲ್ಲ. ಗೂಡಿನ ಬೆಲೆ ಇಳಿಕೆ ಆಗಿರುವುದರಿಂದ ಹುಳು ಸಾಕಾಣಿಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ವಿವರಿಸಿದರು.