ದೇವನಹಳ್ಳಿ: ’ಹೊಸಕೋಟೆ ತಾಲ್ಲೂಕಿನ ಎಚ್.ಬೇಗೂರು ಗ್ರಾಮದ ಐತಿಹಾಸಿಕ ಶ್ರೀತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಡಿ.18ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ’ ಎಂದು ದೇವಾಲಯದ ಅರ್ಚಕ ಅಶ್ವತ್ಥ್ ತಿಳಿಸಿದ್ದಾರೆ.
ಮಧ್ಯರಾತ್ರಿ 1ರಿಂದ ಸುಪ್ರಭಾತ ಸೇವೆಯೊಂದಿಗೆ ದೇವರಿಗೆ ಅಭಿಷೇಕ ಮತ್ತು ಅಲಂಕಾರದ ನಡೆಯಲಿದೆ. ಮುಂಜಾನೆ 5ಕ್ಕೆ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಮತ್ತು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಮಹಾಮಂಗಳಾರತಿ, ತೀರ್ಥ– ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 7ಕ್ಕೆ ದೇವರ ಉತ್ಸವ ಹಾಗೂ ಉಯ್ಯಾಲೋತ್ಸವ ಏರ್ಪಡಿಸಲಾಗಿದೆ.