ಹೊಸಕೋಟೆ: ತಾಲ್ಲೂಕಿನ ರೋಟರಿ ಸಂಸ್ಥೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಬೇಕು ಎಂದು ಇಂಟರ್ನ್ಯಾಷನಲ್ ರೋಟರಿ ಸಂಸ್ಥೆ ಅಧ್ಯಕ್ಷ ಶೇಖರ್ ಮೆಹತ ತಿಳಿಸಿದರು.
154 ಕ್ಲಬ್ಗಳ ನೂತನ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆ ಅಧ್ಯಕ್ಷ ವಿ. ವಿಜಯ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಗೌವರ್ನರ್ ಡಿ.ಎಸ್. ರಾಜಕುಮಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷ ಬಚ್ಚಣ್ಣ, ಮಾಜಿ ಅಧ್ಯಕ್ಷರಾದ ಡಾ.ನಟರಾಜ್, ಡಾ.ನಾಗರಾಜ್, ನಿರ್ದೇಶಕರಾದ ಪ್ರಭಾಕರ್, ಕಾರ್ಯದರ್ಶಿ ರಮೇಶ್ ಇದ್ದರು.