‘ವಾಹನ ಚಾಲಕನ ನಿಯಂತ್ರಣ ತಪ್ಪುತ್ತಿದ್ದುದ್ದನ್ನು ಗಮನಿಸಿದ ಪಕ್ಕದಲ್ಲಿದ್ದ ಕಿರಣ್ ಅದನ್ನು ಕೂಡಲೇ ನಿಯಂತ್ರಿಸಿದರು. ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದರು. ಎಲ್ಲರೂ ಸೇರಿ ಚಾಲಕನಿಗೆ ಆರೈಕೆ ಮಾಡಿದೆವು. ಬಳಿಕ ಕಿರಣ್ ಬೆಳಗಾವಿವರೆಗೂ ವಾಹನ ಚಲಾಯಿಸಿಕೊಂಡು ಹೋದರು. ಎಲ್ಲರೂ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾದೆವು’ ಎಂದು ಇಲ್ಲಿನ ಪರೀಕ್ಷಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.