ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ಜಾಗತಿಕ ಸಾಹಿತ್ಯದಲ್ಲಿ ಮಾರ್ಕ್ಸ್ವಾದದ ಮೂಲಕ ಬಹು ದೊಡ್ಡ ಸಾಹಿತ್ಯ ರಚನೆಯಾಗಿರುವುದನ್ನು ಕಾಣುತ್ತೇವೆ. ರಷ್ಯಾದ ಗಾರ್ಕಿ, ಇಂಗ್ಲೆಂಡ್ನ ಇ.ಎಂ. ಪ್ರಾಸ್ಟರ್, ಭಾರತದ ಮುನ್ಷಿ ಪ್ರೇಮಚಂದ, ಕನ್ನಡದ ಕಟ್ಟೀಮನಿ ಅವರು ಸಮಾನಾಂತರವಾಗಿ ನಿಂತ ಲೇಖಕರಾಗಿದ್ದಾರೆ. ಭಾರತೀಯ ಸಾಹಿತ್ಯದಲ್ಲಿ ಅವರದ್ದು ಮಹತ್ವದ ಪಾತ್ರ’ ಎಂದು ತಿಳಿಸಿದರು.