ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 76 ಬಾಟಲಿ ರಕ್ತ ಸಂಗ್ರಹ

Last Updated 10 ಮೇ 2020, 8:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗೋಮಟೇಶ ವಿದ್ಯಾಪೀಠದಲ್ಲಿ ಭಾರತೀಯ ಜನತಾ ಪಕ್ಷ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ನೇತೃತ್ವದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 76 ಬಾಟಲಿ ರಕ್ತ ಸಂಗ್ರಹವಾಗಿದೆ. ಅದನ್ನು ಮಹಾವೀರ ರಕ್ತ ನಿಧಿಗೆ ಹಸ್ತಾಂತರಿಸಲಾಯಿತು.

‘ಕೊರೊನಾ ಸೋಂಕು ಭೀತಿಯಿಂದಾಗಿ ದಾನಿಗಳು ಮುಂದೆ ಬಾರದ ಕಾರಣ ಆಸ್ಪತ್ರೆ, ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಂಗ್ರಹಣೆಯ ಕೊರತೆ ಎದುರಾಗಿದ್ದನ್ನು ಮನಗಂಡು ಕಾರ್ಯಕರ್ತರ ಜೊತೆ ಚರ್ಚಿಸಿ ಶಿಬಿರ ನಡೆಸಿದ್ದೇವೆ. ಅಂತರ ಕಾಯ್ದುಕೊಂಡು ಹಲವರು ರಕ್ತದಾನ ಮಾಡಿದರು’ ಎಂದು ಸಂಜಯ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಮುಖಂಡರಾದ ಪ್ರಭು ಹೂಗಾರ, ಯುವರಾಜ ಜಾಧವ, ಸನತಕುಮಾರ ವಿ.ವಿ. ರಾಜೇಶ ಪಾಟೀಲ, ಅಭಯ ಅವಲಕ್ಕಿ, ವೀರಭದ್ರ ಪುಜಾರ, ವೀರಭದ್ರಯ್ಯ ನೇಸರಗಿ, ಡಾ.ಯಲ್ಲಪ್ಪ ಪಾಟೀಲ, ನಿತೀನ ಚೌಗಲೆ, ಯಲ್ಲಪ್ಪ ಶಹಾಪೂರಕರ, ರವಿ ದೊಡ್ಡಣ್ಣವರ, ಬ್ರಹ್ಮಾನಂದ ನಿಲಜಗಿ, ಜಿನ್ನು ಸಂಕಣ್ಣವರ, ಎಸ್.ಕೆ. ಕಟ್ಟಿ, ಎ.ಬಿ. ಸುಪ್ಪಣ್ಣವರ, ಡಿ.ಎಸ್. ಹನಗಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT