<p><strong>ಬೆಳಗಾವಿ:</strong> ನಗರದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರು ಹಾಗೂ ಮಾರಕಾಸ್ತ್ರ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.</p>.<p>ಇಲ್ಲಿನ ಶಾಸ್ತ್ರಿ ನಗರದ ಉತ್ಕರ್ಷ ವರ್ಮಾ (24), ಘೀ ಗಲ್ಲಿಯ ರಿಯಾಜ ಅಬ್ದುಲ್ ರೆಹಮಾನ್ ಘೀವಾಲೆ (46) ಹಾಗೂ ಕಂಗ್ರಾಳ ಗಲ್ಲಿಯ ಅಶೋಕ ಬಾಬು ಜಾಧವ (58) ಬಂಧಿತರು.</p>.<p>ಬೆಳಗಾವಿಯ ಪಾಟೀಲಮಾಳ ಗಲ್ಲಿಯಲ್ಲಿ ಗಾಂಜಾ ಸೇವಿಸಿದ್ದ ಉತ್ಕರ್ಷನನ್ನು ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಂಜಾರಗಲ್ಲಿಯಲ್ಲಿ ರಿಯಾಜ ಘೀವಾಲೇ ಹಾಗೂ ಅಶೋಕ ಜಾಧವನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡು ಅಶೋಕ ನಗರದ ಹೆದ್ದಾರಿ ಅಂಡರ್ ಪಾಸ್ ಬಳಿ ತಿರುಗಾಡುತ್ತಿದ್ದ ಬೆಳಗಾವಿಯ ಸುಭಾಷ್ ನಗರದ ಫಾರಿಕ ರೆಹಮಾನ್ ಚಜ್ಜು (35) ಎಂಬ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದು, ತಲವಾರ್ ವಶಕ್ಕೆ ಪಡೆದಿದ್ದಾರೆ.</p>.<p><strong>ಮನೆ ಕಳ್ಳತನ: ಇಬ್ಬರ ಬಂಧನ</strong> </p><p><strong>ಕಾಗವಾಡ:</strong> ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಗವಾಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಉಗಾರ ಖುರ್ದ್ ಗ್ರಾಮದ ಯಾಸೀನ್ ಸುತಾರ ಜಮೀರ್ ಜಮಾದಾರ ಬಂಧಿತರು. ಅವರಿಂದ ₹19.58 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ತಮ್ಮ ಮನೆ ಕಳ್ಳತನವಾಗಿದೆ ಎಂದು ಉಗಾರ ಖುರ್ದ್ನ ಜಿನ್ನಪ್ಪ ಮಾಕನ್ನವರ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರು ಹಾಗೂ ಮಾರಕಾಸ್ತ್ರ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.</p>.<p>ಇಲ್ಲಿನ ಶಾಸ್ತ್ರಿ ನಗರದ ಉತ್ಕರ್ಷ ವರ್ಮಾ (24), ಘೀ ಗಲ್ಲಿಯ ರಿಯಾಜ ಅಬ್ದುಲ್ ರೆಹಮಾನ್ ಘೀವಾಲೆ (46) ಹಾಗೂ ಕಂಗ್ರಾಳ ಗಲ್ಲಿಯ ಅಶೋಕ ಬಾಬು ಜಾಧವ (58) ಬಂಧಿತರು.</p>.<p>ಬೆಳಗಾವಿಯ ಪಾಟೀಲಮಾಳ ಗಲ್ಲಿಯಲ್ಲಿ ಗಾಂಜಾ ಸೇವಿಸಿದ್ದ ಉತ್ಕರ್ಷನನ್ನು ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಂಜಾರಗಲ್ಲಿಯಲ್ಲಿ ರಿಯಾಜ ಘೀವಾಲೇ ಹಾಗೂ ಅಶೋಕ ಜಾಧವನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಇನ್ನೊಂದು ಪ್ರಕರಣದಲ್ಲಿ ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡು ಅಶೋಕ ನಗರದ ಹೆದ್ದಾರಿ ಅಂಡರ್ ಪಾಸ್ ಬಳಿ ತಿರುಗಾಡುತ್ತಿದ್ದ ಬೆಳಗಾವಿಯ ಸುಭಾಷ್ ನಗರದ ಫಾರಿಕ ರೆಹಮಾನ್ ಚಜ್ಜು (35) ಎಂಬ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದು, ತಲವಾರ್ ವಶಕ್ಕೆ ಪಡೆದಿದ್ದಾರೆ.</p>.<p><strong>ಮನೆ ಕಳ್ಳತನ: ಇಬ್ಬರ ಬಂಧನ</strong> </p><p><strong>ಕಾಗವಾಡ:</strong> ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಗವಾಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಉಗಾರ ಖುರ್ದ್ ಗ್ರಾಮದ ಯಾಸೀನ್ ಸುತಾರ ಜಮೀರ್ ಜಮಾದಾರ ಬಂಧಿತರು. ಅವರಿಂದ ₹19.58 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ತಮ್ಮ ಮನೆ ಕಳ್ಳತನವಾಗಿದೆ ಎಂದು ಉಗಾರ ಖುರ್ದ್ನ ಜಿನ್ನಪ್ಪ ಮಾಕನ್ನವರ ದೂರು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>