ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಪ್ರಮುಖ ಪಟ್ಟಣವಿದು. ಮಹಾರಾಷ್ಟ್ರ, ವಿಜಯಪುರ, ಬೆಳಗಾವಿ, ಜಮಖಂಡಿ, ಜತ್ತ, ಸಾಂಗ್ಲಿ, ಚಿಕ್ಕೋಡಿ ಹೀಗೆ... ನೂರಾರು ಕಡೆಗಳಿಗೆ ಸಾವಿರಾರು ಮಂದಿ ಪಟ್ಟಣದ ಮೂಲಕ ಸಂಚರಿಸುತ್ತಾರೆ. ನಿತ್ಯ 600 ಬಸ್ಗಳು ಸಂಚರಿಸುತ್ತವೆ. ಹಳೆ ಬಸ್ ನಿಲ್ದಾಣದಲ್ಲಿ ಇರುವ ಚಿಕ್ಕದಾದ ಜಾಗ ಸಾಲುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ. ಹೊಸ ಬಸ್ ನಿಲ್ದಾಣದಲ್ಲಿ ಒಮ್ಮೆಗೆ 20 ಬಸ್ಗಳು ನಿಲ್ಲುವುದಕ್ಕೆ ಜಾಗ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ.