ಸೋಮವಾರ ಮುಂಜಾನೆ ಸಿದ್ದೇಶ್ವರ ದೇವರಿಗೆ ಮಾಹಾ ಪೂಜೆ ನೈವೇದ್ಯ ನಡೆಯಿತು. ಸಂಜೆ ವಿವಿಧ ತಂಡಗಳಿಂದ ಚೌಡಕಿ ಪದಗಳ ಕಾರ್ಯಕ್ರಮ ನಡೆಯಿತು. ಮಂಗಳವಾರ ವಿವಿಧ ಗ್ರಾಮಗಳಿಂದ ಆಗಮಿಸಿದ ದೇವರ ಪಲ್ಲಕ್ಕಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಸಾಂಗೋಲಾ ಪಟ್ಟಣದ ರೈತ ರಮೇಶ ಗೆಜಗೆ, ಜಾತ್ರೆಯ ಕಮಿಟಿ ಅಧ್ಯಕ್ಷ ಬಾಳಪ್ಪ ನರಟ್ಟಿ, ಧರ್ಮಾಜಿ ಕೋಳೆಕರ, ಭರತೇಶ ಪಡನಾಡ, ಬಸು ತೇಲಿ, ಅವ್ವಣ್ಣ ಪಾಟೀಲ, ಮುರಗೆಪ್ಪ ಹಳಮನಿ, ಲಕ್ಷ್ಮಣ ನರಟ್ಟಿ, ಸುರೇಶ ಕೋಳೆಕರ, ಬಸವರಾಜ ಸುರಗೊಂಡ, ವಿಠ್ಠಲ ಕೋಳೆಕರ ಇದ್ದರು.