<p><strong>ರಾಮದುರ್ಗ:</strong> ಮುಂಚಿನ ದಿನಗಳಲ್ಲಿ ಮನೆಗೆ ನೆಂಟರು ಬಂದರೆ ಆತ್ಮೀಯವಾಗಿ ಸ್ವಾಗತಿಸಿ ಕುಶಲೋಪರಿ ವಿಚಾರಿಸುತ್ತಿದ್ದರು. ಈಗೀಗ ಮನೆಗೆ ನೆಂಟರು, ಸ್ನೇಹಿತರು ಬಂದರೆ ಟಿವಿ ಇಲ್ಲವೇ ಮೊಬೈಲ್ ನೋಡುವಲ್ಲಿಯೇ ಮಗ್ನರಾಗಿರುತ್ತಾರೆ. ಮಕ್ಕಳು ಇದರಿಂದ ಹೊರತಾಗಿಲ್ಲ. ಈ ಗೀಳಿನಿಂದ ಎಲ್ಲರೂ ಹೊರಬರಬೇಕಿದೆ ಎಂದು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ದ್ಯಾಮವ್ವದೇವಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಟಿವಿ, ಮೊಬೈಲ್ ನೋಡುವಲ್ಲಿ ಸಮಯ ಕಳೆಯುತ್ತಿದ್ದಾರೆ. ಟಿವಿ, ಮೊಬೈಲ್ ತೊರೆದು ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.</p>.<p>ಗ್ರಾಮದ ದೈವ ಮಂಡಳಿಯ ಹಣ, ಸಂಸದರ ಅನುದಾನ ಬಳಕೆ ಮಾಡಿಕೊಂಡು ಸುಂದರ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ. ಸಮುದಾಯ ಭವನ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ದ್ಯಾಮಮ್ಮದೇವಿ ದೇವಸ್ಥಾನ, ಸಮುದಾಯ ಭವನದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.</p>.<p>ಬಿಜೆಪಿ ಮುಖಂಡ ಬಸವರಾಜ ಸೋಮಗೊಂಡ ಮಾತನಾಡಿ, ಇಲ್ಲಿನ ಸದ್ಭಕ್ತ ಮಂಡಳಿ ಮತ್ತು ಗ್ರಾಮಸ್ಥರು ತನು, ಮನ, ಧನದಿಂದ ಸೇವೆ ಸಲ್ಲಿಸಿದ ಪ್ರಯುಕ್ತ ಭವ್ಯ ಸಮುದಾಯ ಭವನ ನಿರ್ಮಾಣವಾಗಿದೆ ಎಂದರು.</p>.<p>ಗ್ರಾಮದ ಹಿರಿಯ ಮುಖಂಡ ಭೀಮಪ್ಪ ಹರನಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬೈಲಪ್ಪ ಮುಳ್ಳೂರ, ಗೌಡಪ್ಪಗೌಡ ಪಾಟೀಲ ಮಾತನಾಡಿದರು.</p>.<p>ಭೀರದೇವರ ಪೂಜಾರಿ ಭೀಮಪ್ಪ ಮುರಗನ್ನವರ ಮುಖಂಡರಾದ ಐ.ಎಸ್. ಹರನಟ್ಟಿ, ಶಿವಯೋಗಿ ಗೊಂದಿ, ಹಣಮರಡ್ಡಿ ಗೊಂದಿ, ಹಣಮಂತ ಹಳ್ಳಿ, ಬಸವರಾಜ ಹಳ್ಳಿ, ನಾಗನಗೌಡ ಕುಲಕರ್ಣಿ, ಬಾಳನಗೌಡ ಕುಲಕರ್ಣಿ, ಮಂಜು ಬುಳ್ಳನ್ನವರ, ಬಸಪ್ಪ ಮುಳ್ಳೂರ, ಶಿವಪ್ಪ ಮುಳ್ಳೂರ ಇದ್ದರು.</p>.<p>ರವಿ ಮಿಲಾನಟ್ಟಿ ಸ್ವಾಗತಿಸಿದರು. ಈರಣ್ಣ ಹರನಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.</p>
<p><strong>ರಾಮದುರ್ಗ:</strong> ಮುಂಚಿನ ದಿನಗಳಲ್ಲಿ ಮನೆಗೆ ನೆಂಟರು ಬಂದರೆ ಆತ್ಮೀಯವಾಗಿ ಸ್ವಾಗತಿಸಿ ಕುಶಲೋಪರಿ ವಿಚಾರಿಸುತ್ತಿದ್ದರು. ಈಗೀಗ ಮನೆಗೆ ನೆಂಟರು, ಸ್ನೇಹಿತರು ಬಂದರೆ ಟಿವಿ ಇಲ್ಲವೇ ಮೊಬೈಲ್ ನೋಡುವಲ್ಲಿಯೇ ಮಗ್ನರಾಗಿರುತ್ತಾರೆ. ಮಕ್ಕಳು ಇದರಿಂದ ಹೊರತಾಗಿಲ್ಲ. ಈ ಗೀಳಿನಿಂದ ಎಲ್ಲರೂ ಹೊರಬರಬೇಕಿದೆ ಎಂದು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ದ್ಯಾಮವ್ವದೇವಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಟಿವಿ, ಮೊಬೈಲ್ ನೋಡುವಲ್ಲಿ ಸಮಯ ಕಳೆಯುತ್ತಿದ್ದಾರೆ. ಟಿವಿ, ಮೊಬೈಲ್ ತೊರೆದು ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.</p>.<p>ಗ್ರಾಮದ ದೈವ ಮಂಡಳಿಯ ಹಣ, ಸಂಸದರ ಅನುದಾನ ಬಳಕೆ ಮಾಡಿಕೊಂಡು ಸುಂದರ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ. ಸಮುದಾಯ ಭವನ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ದ್ಯಾಮಮ್ಮದೇವಿ ದೇವಸ್ಥಾನ, ಸಮುದಾಯ ಭವನದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.</p>.<p>ಬಿಜೆಪಿ ಮುಖಂಡ ಬಸವರಾಜ ಸೋಮಗೊಂಡ ಮಾತನಾಡಿ, ಇಲ್ಲಿನ ಸದ್ಭಕ್ತ ಮಂಡಳಿ ಮತ್ತು ಗ್ರಾಮಸ್ಥರು ತನು, ಮನ, ಧನದಿಂದ ಸೇವೆ ಸಲ್ಲಿಸಿದ ಪ್ರಯುಕ್ತ ಭವ್ಯ ಸಮುದಾಯ ಭವನ ನಿರ್ಮಾಣವಾಗಿದೆ ಎಂದರು.</p>.<p>ಗ್ರಾಮದ ಹಿರಿಯ ಮುಖಂಡ ಭೀಮಪ್ಪ ಹರನಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬೈಲಪ್ಪ ಮುಳ್ಳೂರ, ಗೌಡಪ್ಪಗೌಡ ಪಾಟೀಲ ಮಾತನಾಡಿದರು.</p>.<p>ಭೀರದೇವರ ಪೂಜಾರಿ ಭೀಮಪ್ಪ ಮುರಗನ್ನವರ ಮುಖಂಡರಾದ ಐ.ಎಸ್. ಹರನಟ್ಟಿ, ಶಿವಯೋಗಿ ಗೊಂದಿ, ಹಣಮರಡ್ಡಿ ಗೊಂದಿ, ಹಣಮಂತ ಹಳ್ಳಿ, ಬಸವರಾಜ ಹಳ್ಳಿ, ನಾಗನಗೌಡ ಕುಲಕರ್ಣಿ, ಬಾಳನಗೌಡ ಕುಲಕರ್ಣಿ, ಮಂಜು ಬುಳ್ಳನ್ನವರ, ಬಸಪ್ಪ ಮುಳ್ಳೂರ, ಶಿವಪ್ಪ ಮುಳ್ಳೂರ ಇದ್ದರು.</p>.<p>ರವಿ ಮಿಲಾನಟ್ಟಿ ಸ್ವಾಗತಿಸಿದರು. ಈರಣ್ಣ ಹರನಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.</p>