ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ನದಿ ತಟದಲ್ಲಿ ಸ್ವಚ್ಚತಾ ಕಾರ್ಯಕೈಗೊಂಡ ಸ್ವಯಂ ಸೇವಕರು

Published 1 ಜೂನ್ 2023, 13:47 IST
Last Updated 1 ಜೂನ್ 2023, 13:47 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿ ದಡದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.

ಮಲಪ್ರಭಾ ನದಿ ದಡದಲ್ಲಿ ಹಾಗೂ ಶರಣೆ ಗಂಗಾಂಬಿಕಾ ಐಕ್ಯಮಂಟಪದ ಬಳಿ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯಕೈಗೊಂಡರು. ನದಿ ತೀರದ ಗೋಡೆಯ ಮೇಲೆ ನದಿಯ ನೀರಿನ ಸಮರ್ಪಕ ಬಳಕೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಲು ಪ್ರೇರಣೆ ನೀಡುವ ಬರಹಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವಯಂ ಸೇವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 60ಕ್ಕೂ ಅಧಿಕ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸಂಯೋಜಕ ಸಂತೋಷ ಖೋತ ಕಾರ್ಯಕ್ರಮದ ನೇತೃತ್ವ

ವಹಿಸಿದ್ದರು. ಸ್ವಯಂ ಸೇವಕರಾದ ಸೌರಭ್, ರೋಸ್, ನೀಲಾ, ಹರ್ಷಿತಾ, ಗಣೇಶ, ಶಂಕರ, ಈರಣ್ಣ, ಅಭಿಷೇಕ, ವಿನೀತ, ದಿವ್ಯಾ, ಯಲ್ಲಪ್ಪ, ಕಾಶವ್ವ ಇತರರು ಭಾಗಿಯಾಗಿದ್ದರು.

1mkh1 ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯಕೈಗೊಳ್ಳಲಾಯಿತು.
1mkh1 ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯಕೈಗೊಳ್ಳಲಾಯಿತು.
1mkh1(A) ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯಕೈಗೊಂಡ ಸ್ವಯಂ ಸೇವಕ ತಂಡ.
1mkh1(A) ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯಕೈಗೊಂಡ ಸ್ವಯಂ ಸೇವಕ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT