ಬಳಿಕ ನಡೆದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಡವರು ₹2 ಲಕ್ಷ ಸಾಲ ಪಾವತಿಸಿದ್ದರೆ ಡಂಗುರ ಬಾರಿಸಿ, ಮನೆಗಳಿಗೆ ಹೋಗಿ ವಸೂಲಿ ಮಾಡುತ್ತೀರಿ. ಆದರೆ, ಸೊಸೈಟಿಗಳ ಮೂಲಕ ಶ್ರೀಮಂತರು ಹಾಗೂ ರಾಜಕಾರಣಿಗಳಿಗೆ ನೀಡಿರುವ ₹250 ಕೋಟಿ ಸಾಲ ವಸೂಲಿ ಮಾಡುವ ತಾಕತ್ತಿಲ್ಲವೇ? ಹಾಗಾದರೆ ಅಂಥವರಿಗೆ ಸಾಲ ಕೊಡುತ್ತೀರೇಕೆ? ಎಂದು ಸೊಸೈಟಿಗಳವರನ್ನು ಪ್ರಶ್ನಿಸಿದರು.