ಕಪ್ಪು ಬಟ್ಟೆಯ ದಿರಿಸು ಹಾಕಿದ್ದರು. ರಾಕ್ಷಸ ರೀತಿಯಲ್ಲಿ ಮುಖಕ್ಕೆ ಬಣ್ಣ ಹಾಕಿಕೊಂಡು ಎದೆ, ಹೊಟ್ಟೆ ಮತ್ತು ಬೆನ್ನು ಮೇಲೆ ‘ಹೊರಗೆ ಬಂದರೆ ನಿಮ್ಮನ್ನು ಬಿಡೊಲ್ಲ’, ‘ಕಾನೂನು ಪಾಲನೆ ಎಲ್ಲರ ಹೊಣೆ’ ಎಂಬಿತ್ಯಾದಿ ಬರಹಗಳಿಂದ ಜನರಲ್ಲಿ ಕೊರೊನಾ ಕುರಿತು ಸ್ವಯಂ ಪ್ರೇರಣೆಯಿಂದ ಜಾಗೃತಿ ಮೂಡಿಸಿದರು. ಲಾಕ್ಡೌನ್ ಮುಗಿಯುವವರೆಗೂ ಹೊರಗಡೆಗೆ ಬರಬೇಡಿ ಎಂಬ ಸಂದೇಶವನ್ನು ಜನರಿಗೆ ರವಾನಿಸಿದರು.