‘ವಿನಯ ಅವರಿಗೆ ಕುಟುಂಬದವರು ತಲುಪಿಸಿದ್ದ ಬಟ್ಟೆಗಳು ಹಾಗೂ ಮಾತ್ರೆಗಳನ್ನು ಪರಿಶೀಲಿಸಿ ಕೊಡಲಾಗಿತ್ತು. ಅವರಿಗೆ ಜೈಲಿನ ಊಟವನ್ನೇ ನೀಡಲಾಗುತ್ತಿದೆ. ಹಾಸಿಗೆಯನ್ನೂ ಕೊಟ್ಟಿಲ್ಲ. ನಿಯಮದಂತೆ, ವಕೀಲರು ಹಾಗೂ ಕುಟುಂಬದವರಿಗೆ ಸಂಪರ್ಕಕ್ಕೆ ಸ್ಥಿರ ದೂರವಾಣಿಯನ್ನು ಅಧಿಕಾರಿಗಳ ಸಮ್ಮುಖದಲ್ಲೇ ಒದಗಿಸಲಾಗುತ್ತಿದೆ. ಅದನ್ನು ದಾಖಲಿಸಲಾಗುತ್ತಿದೆ. ಅವರಿಗೆ ಮೊಬೈಲ್ ಫೋನ್ ವ್ಯವಸ್ಥೆ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದು. ಕೋವಿಡ್–19 ಕಾರಣದಿಂದಾಗಿ ಹೊರಗಿನವರ ಭೇಟಿಗೆ ಅವಕಾಶ ಕೊಟ್ಟಿಲ್ಲ. ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ’ ಎಂದು ಸೂಪರಿಂಟೆಂಡೆಂಟ್ ಕೃಷ್ಣಕುಮಾರ್ ಸ್ಪಷ್ಟಪಡಿಸಿದರು.