ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತಿವೋಲಿವಾಡಾ ಗ್ರಾಮದಲ್ಲಿ ಮಂಗಳವಾರ ಹೊಲ ಉಳುಮೆ ಮಾಡುತ್ತಿದ್ದ ವೇಳೆ ಚಿಕ್ಕ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಿವೋಲಿವಾಡಾ ನಿವಾಸಿ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಸದೊಬ್ಬ ಲಾಡಗಾವ್ಕರ್ (68) ಮೃತಪಟ್ಟವರು.
ಭತ್ತ ನಾಟಿ ಮಾಡುವ ಸಲುವಾಗಿ ಈ ರೈತ ಹೊಲ ಉಳುಮೆ ಮಾಡುತ್ತಿದ್ದರು. ಗದ್ದೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ತಗ್ಗಿಗೆ ಸಿಕ್ಕಿಕೊಂಡ ಚಿಕ್ಕ ಟ್ರ್ಯಾಕ್ಟರ್ (ರೂಟೋವೇಟರ್) ಹಿಂದಕ್ಕೆ ಪಲ್ಟಿಯಾಗಿ ಬಿದ್ದಿತು. ಕೆಸರಿನಡಿ ಸಿಲುಕಿದ ರೈತ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಡಾ.ಅಂಜಲಿ ನಿಂಬಾಳಕರ, ಅರವಿಂದ ಪಾಟೀಲ ಭೇಟಿ ನೀಡಿದರು