ಇಲ್ಲಿನ ಹೊಸ ಹಾಗೂ ಹಳೇ ಗಾಂಧಿ ನಗರ, ಓಂ ನಗರ, ಅನ್ನಪೂರ್ಣೇಶ್ವರಿ ನಗರ, ಯಳ್ಳೂರ ರಸ್ತೆ, ಕೊನವಾಳ ಗಲ್ಲಿ, ಪೀರಣವಾಡಿ ಸೇರಿ ವಿವಿಧೆಡೆ ಮಳೆ ನೀರು ಮನೆಗಳಲ್ಲಿ ತುಂಬಿಕೊಂಡಿತ್ತು. ಚರಂಡಿಗಳು ತುಂಬಿ ಹರಿದಿದ್ದರಿಂದ ಆ ನೀರು ಕೂಡ ಮನೆಗಳಿಗೆ ನುಗ್ಗಿತ್ತು. ಇದರಿಂದ ಕೆಲವೆಡೆ ಮನೆಯಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ. ನಿವಾಸಿಗಳು ನೀರು ಹೊರಹಾಕಿದರೂ ಮಳೆಯಿಂದ ಮತ್ತೆ ನೀರು ಒಳಬರುತ್ತಿತ್ತು.