<p><strong>ಗೋಕಾಕ:</strong> ‘ವಿದ್ಯಾರ್ಥಿಗಳು ತರಬೇತಿ ಪೂರೈಸಿದ ಬಳಿಕವೂ ನಿರಂತರ ಅಭ್ಯಾಸ ಮುಂದುವರೆಸುವ ಹವ್ಯಾಸ ರೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಲು ಸಾಧ್ಯ’ ಎಂದು ಐ.ಸಿ.ಟಿ. ಅಕ್ಯಾಡೆಮಿ ಸಂಸ್ಥೆಯ ಮುಖ್ಯಸ್ಥ ಡಿ. ವಿಷ್ಣು ಪ್ರಸಾದ್ ಹೇಳಿದರು.</p>.<p>ಇಲ್ಲಿನ ಸಿದ್ದಲಿಂಗೇಶ್ವರ ಬಿ.ಸಿ.ಎ. ಮಹಾವಿದ್ಯಾಲಯದಲ್ಲಿ ಬಿ.ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐ.ಸಿ.ಟಿ. ಅಕಾಡೆಮಿ ಸಂಸ್ಥೆ ಮತ್ತು ಐ.ಬಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೌಶಲ ನಿರ್ಮಾಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ವಿದ್ಯಾರ್ಥಿಗಳು 16 ತಾಸುಗಳ ಸ್ವಯಂ ಓದಿನ ಹವಾಸ್ಯ ಕರಗತ ಮಾಡಿಕೊಳ್ಳಬೇಕು. ನಮ್ಮ ಕಂಪನಿಯಿಂದ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಾವು ಮುಂದಿನ ಒಂದು ವರ್ಷಗಳ ಕಾಲ ಅವರಲ್ಲಿಯ ಕೌಶಲಗಳನ್ನು ಅಭಿವೃದ್ಧಿ ಪಡೆಸುವ ಕಾರ್ಯವನ್ನು ಐ.ಬಿ.ಎಂ. ಕಾರ್ಯಗತಗೊಳಿಸುತ್ತದೆ’ ಎಂದು ತಿಳಿಸಿದರು.</p>.<p>ಸಂಸ್ಥೆಯ ನಿರ್ದೇಶಕ ವಿಶ್ವನಾಥ ಶಿಂಧೋಳಿಮಠ ಮಾತನಾಡಿ, ‘ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಸಿಮಿತವಾಗದೆ, ಸಮೂಹ ಸಂವಹನ ಕೌಶಲಗಳನ್ನು ಕಲಿಯಬೇಕು. ತಂತ್ರಜ್ಞಾನ ಯುಗದಲ್ಲಿ ಕಾಪಿ-ಪೇಸ್ಟ್ ಮಾಡದೆ ಸತ್ಯಾಸತ್ಯತೆ ದೃಢೀಕರಣ ಮಾಡಿಕೊಳ್ಳಬೇಕು’ ಎಂದರು.</p>.<p>‘ಒಂದು ಪದವಿ ಪಡೆದುಕೊಂಡರೆ ನಾವು ಎಲ್ಲವನ್ನು ಕಲಿತುಕೊಂಡಿದ್ದೇನೆ ಎಂಬ ಕಲ್ಪನೆ ಹೊಂದಿದರೆ ಸಾಲದು, ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬ ಸತ್ಯವನ್ನು ಅರಿತು ವಿದ್ಯಾರ್ಥಿಗಳು ಮುಂದೆ ಸಾಗಬೇಕು’ ಎಂದು ಹೇಳಿದರು.</p>.<p>ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಐ.ಸಿ.ಟಿ. ಅಕಾಡೆಮಿ ಸಂಸ್ಥೆಯ ಪ್ರವೀಣ್ ಗಸ್ತಿ, ತರಬೇತಿದಾರ ಶಶಿಕಾಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ:</strong> ‘ವಿದ್ಯಾರ್ಥಿಗಳು ತರಬೇತಿ ಪೂರೈಸಿದ ಬಳಿಕವೂ ನಿರಂತರ ಅಭ್ಯಾಸ ಮುಂದುವರೆಸುವ ಹವ್ಯಾಸ ರೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಲು ಸಾಧ್ಯ’ ಎಂದು ಐ.ಸಿ.ಟಿ. ಅಕ್ಯಾಡೆಮಿ ಸಂಸ್ಥೆಯ ಮುಖ್ಯಸ್ಥ ಡಿ. ವಿಷ್ಣು ಪ್ರಸಾದ್ ಹೇಳಿದರು.</p>.<p>ಇಲ್ಲಿನ ಸಿದ್ದಲಿಂಗೇಶ್ವರ ಬಿ.ಸಿ.ಎ. ಮಹಾವಿದ್ಯಾಲಯದಲ್ಲಿ ಬಿ.ಸಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐ.ಸಿ.ಟಿ. ಅಕಾಡೆಮಿ ಸಂಸ್ಥೆ ಮತ್ತು ಐ.ಬಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೌಶಲ ನಿರ್ಮಾಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ವಿದ್ಯಾರ್ಥಿಗಳು 16 ತಾಸುಗಳ ಸ್ವಯಂ ಓದಿನ ಹವಾಸ್ಯ ಕರಗತ ಮಾಡಿಕೊಳ್ಳಬೇಕು. ನಮ್ಮ ಕಂಪನಿಯಿಂದ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಾವು ಮುಂದಿನ ಒಂದು ವರ್ಷಗಳ ಕಾಲ ಅವರಲ್ಲಿಯ ಕೌಶಲಗಳನ್ನು ಅಭಿವೃದ್ಧಿ ಪಡೆಸುವ ಕಾರ್ಯವನ್ನು ಐ.ಬಿ.ಎಂ. ಕಾರ್ಯಗತಗೊಳಿಸುತ್ತದೆ’ ಎಂದು ತಿಳಿಸಿದರು.</p>.<p>ಸಂಸ್ಥೆಯ ನಿರ್ದೇಶಕ ವಿಶ್ವನಾಥ ಶಿಂಧೋಳಿಮಠ ಮಾತನಾಡಿ, ‘ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಸಿಮಿತವಾಗದೆ, ಸಮೂಹ ಸಂವಹನ ಕೌಶಲಗಳನ್ನು ಕಲಿಯಬೇಕು. ತಂತ್ರಜ್ಞಾನ ಯುಗದಲ್ಲಿ ಕಾಪಿ-ಪೇಸ್ಟ್ ಮಾಡದೆ ಸತ್ಯಾಸತ್ಯತೆ ದೃಢೀಕರಣ ಮಾಡಿಕೊಳ್ಳಬೇಕು’ ಎಂದರು.</p>.<p>‘ಒಂದು ಪದವಿ ಪಡೆದುಕೊಂಡರೆ ನಾವು ಎಲ್ಲವನ್ನು ಕಲಿತುಕೊಂಡಿದ್ದೇನೆ ಎಂಬ ಕಲ್ಪನೆ ಹೊಂದಿದರೆ ಸಾಲದು, ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬ ಸತ್ಯವನ್ನು ಅರಿತು ವಿದ್ಯಾರ್ಥಿಗಳು ಮುಂದೆ ಸಾಗಬೇಕು’ ಎಂದು ಹೇಳಿದರು.</p>.<p>ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಐ.ಸಿ.ಟಿ. ಅಕಾಡೆಮಿ ಸಂಸ್ಥೆಯ ಪ್ರವೀಣ್ ಗಸ್ತಿ, ತರಬೇತಿದಾರ ಶಶಿಕಾಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>