‘ಎಚ್.ಡಿ. ಕುಮಾರಸ್ವಾಮಿ ಬಡಾವಣೆ, ಹನುಮಾನ್ ನಗರ, ಲಕ್ಷ್ಮಿ ಟೇಕಡಿ, ಕುವೆಂಪು ನಗರ, ಕಣಬರ್ಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಾಧಿಕಾರದ ಜಾಗಗಳಿವೆ. ಆದರೆ, ಅಧಿಕಾರಿಗಳಿಗೆ ಅವುಗಳ ಬಗ್ಗೆ ಮಾಹಿತಿ ಇಲ್ಲ. ಅಂಥವುಗಳನ್ನು ತಕ್ಷಣ ಪತ್ತೆ ಹಚ್ಚಬೇಕು. ಎಕರೆಗಟ್ಟಲೆ ಲಭ್ಯವಿರುವ ಜಾಗಗಳ ಸಮೀಕ್ಷೆ ನಡೆಸಬೇಕು. ಪ್ರಾಧಿಕಾರದ ಆಸ್ತಿ ಯಾರದೋ ಪಾಲಾಗಲು ಅವಕಾಶ ಕೊಡಬಾರದು. ಅಧಿಕಾರಿಗಳು ತಕ್ಷಣ ಅವುಗಳ ಪಟ್ಟಿ ತಯಾರಿಸಿ ಕಾರ್ಯಪ್ರವೃತ್ತರಾಗಬೇಕು’ ಎಂದು ತಾಕೀತು ಮಾಡಿದರು.