ಬೆಳಗಾವಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಬಾಲಕರಾದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಅವರನ್ನು ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಶುಕ್ರವಾರ ಸನ್ಮಾನಿಸಿದ ಅಧಿಕಾರಿಗಳು, ಕೇಂದ್ರ ಗೃಹ ಸಚಿವಾಲಯದಿಂದ ಕೊಡಮಾಡಿದ ‘ಜೀವನ ರಕ್ಷಾ’ ಪದಕ, ತಲಾ ₹ 1 ಲಕ್ಷ ಚೆಕ್ ಮತ್ತು ಪ್ರಮಾಣಪತ್ರ ವಿತರಿಸಿದರು.