‘ಹಿಂದಿ ಭಾಷೆಯ ಪರ ವಕಾಲತ್ತು ವಹಿಸುವ ಮೂಲಕ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಳ್ಳಲು ಅಂಗಡಿ ಹೊರಟಿದ್ದಾರೆ. ಇವರು ತಕ್ಷಣ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು. ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಕನ್ನಡಿಗರು ಬಯಸಿದ್ದರು. ಆದರೆ, ಅಂಗಡಿಯವರು ಹಿಂದಿ ಜನರ (ಹೈಕಮಾಂಡ್) ಓಲೈಕೆಗಾಗಿ ಕನ್ನಡಿಗರಿಗೆ ಹಿಂದಿ ಕಲಿಯಿರಿ ಎಂದು ಹೇಳುತ್ತಿದ್ದಾರೆ. ಈ ಮೂಲಕ ಅವರು ನಾಡ ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದ್ದಾರೆ.