ಪಟ್ಟಣದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂದೆ ಕರೀಂಲಾಲ್ ತೆಲಗಿ ಬದುಕಿದ್ದಾಗ, ಸಹೋದರ ಅಬ್ದುಲ್ ಅಜೀಂ ಹೆಸರಿನಲ್ಲಿ ಪಟ್ಟಣದ ಹೊರವಲಯದಲ್ಲಿ 6 ಎಕರೆ ಕೃಷಿ ಜಮೀನು ಖರೀದಿಸಿದ್ದರು. ನಮ್ಮ ಕುಟುಂಬದ ಎಲ್ಲಾ ಆಸ್ತಿ ವಿವರದ ಮಾಹಿತಿಯನ್ನು ನಂದಗಡಿ ಹೊಂದಿದ್ದರು. ಛಾಪಾ ಕಾಗದ ಹಗರಣದಲ್ಲಿ ತಂದೆಯವರು ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ, ಆರು ಎಕರೆ ಜಮೀನನ್ನು ನಮಗೆ ನೀಡದೇ ಅಬ್ದುಲ್ ಅಜೀಂ ಅವರ ಕುಟುಂಬದವರಿಗೆ ಕೊಟ್ಟು, ನಂದಗಡಿ ವಂಚಿಸಿದರು’ ಎಂದು ಆರೋಪಿಸಿದರು.