‘ಅಧ್ಯಾತ್ಮ ಹಾಗೂ ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದೆ. ಆ ಕುರಿತು ಬರೆಯುತ್ತಿದ್ದೆ. ಅದು, ಈಗ ರಾಜಕೀಯ ವಿಶ್ಲೇಷಣೆಗೂ ವಿಸ್ತರಿಸಿದೆ. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ಸಾಹಿತ್ಯ ರಚನೆ ಮಾಡುತ್ತಿದ್ದೇನೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ, ಗೆದ್ದವರ ಮಾಹಿತಿ ಎಲ್ಲ ಜಿಲ್ಲೆಗಳವರಿಗೂ ಒಂದೇ ಕಡೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ಪಾಲಿಟಿಕ್ಸ್’ ಪುಸ್ತಕದಲ್ಲಿ ವಿವರಗಳನ್ನು ದಾಖಲಿಸಿದ್ದೇನೆ’ ಎಂದರು.