ಆಶ್ರಯ ನಗರ ಮತ್ತು ರಾಮನಗರಗಳ ಕೆಲವೆಡೆ ಚರಂಡಿ, ರಸ್ತೆ, ರಸ್ತೆಗೆ ಫೆವರ್ ಬ್ಲಾಕ್ ಅಳವಡಿಸಿಲಾಗಿದೆ. ಆದರೆ, ಪಟ್ಟಣದಿಂದ ಆಶ್ರಯನಗರ ಪ್ರವೇಶಿಸುವ ಪ್ರಾರಂಭದಲ್ಲೇ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಯೂ ಇಲ್ಲ. ಇದರಿಂದಾಗಿ ಮಳೆ ನೀರು, ಬಟ್ಟೆ, ಪಾತ್ರೆಗಳನ್ನು ತೊಳೆದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಅನೈರ್ಮಲ್ಯ ಉಂಟಾಗುತ್ತಿದೆ. ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗುತ್ತಿದೆ. ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ. ಚರಂಡಿ ಇಲ್ಲದ ಕಾರಣ, ಮಳೆಗಾಲದಲ್ಲಿ ಕೆಲವು ಮನೆಗಳಿಗೂ ಮಳೆ ನೀರು ನುಗ್ಗುತ್ತಿದೆ ಎಂಬುದು ನಿವಾಸಿಗಳ ಅಳಲು.