ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಥಣಿ ತಾಲ್ಲೂಕಿನ ಕೊನೆಯ ಹಳ್ಳಿಗಳ ಜನರು ಬೆಳಗಾವಿಗೆ ಬರಲು 200 ಕಿ.ಮೀ ಕ್ರಮಿಸಬೇಕಿದೆ. ಚಿಕ್ಕೋಡಿ, ಗೋಕಾಕ ಮತ್ತು ಬೈಲಹೊಂಗಲದವರಿಂದ ಪ್ರತ್ಯೇಕ ಜಿಲ್ಲೆ ಬೇಡಿಕೆಯಿದೆ. ಇವರ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬ ಪರಿಸ್ಥಿತಿ ನಮ್ಮದಾಗಿದೆ. ಹಾಗಾಗಿ ರಾಯಬಾಗ, ಅಥಣಿ, ಕಾಗವಾಡ, ಕುಡಚಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ತೇರದಾಳ ಕ್ಷೇತ್ರಗಳನ್ನು ಒಳಗೊಂಡ ಅಥಣಿ ಜಿಲ್ಲೆ ರಚಿಸಬೇಕು. ಬೆಳಗಾವಿಯ ಅಧಿವೇಶನದಲ್ಲಿ ಆರು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದರೆ, ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು’ ಎಂದರು.