ಬೆಳಗಾವಿ: ಇಲ್ಲಿನ ಶಿರಸಂಗಿ ಲಿಂಗರಾಜ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯಲ್ಲಿ 145 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮ ಸೋಮವಾರ ನಡೆಯಿತು.
ಮಲಬಾರ್ ಚಾರಿಟಬಲ್ ಟ್ರಸ್ಟ್ನಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು. ಸರ್ದಾರ್ ಕಾಲೇಜು, ವಡಗಾವಿ, ಚಿಂತಾಮಣರಾವ್, ಬೈಲಹೊಂಗಲ ತಾಲ್ಲೂಕು ನೇಸರಗಿ ಮತ್ತು ಖಾನಾಪುರದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ತಲಾ ₹ 500ರಂತೆ ₹ 7.25 ಲಕ್ಷ ವಿತರಿಸಲಾಯಿತು.
ವಿತರಿಸಿದ ಸಂಸದೆ ಮಂಗಲಾ ಸುರೇಶ ಅಂಗಡಿ ಮಾತನಾಡಿ, ‘ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರನ್ನು ಪ್ರೋತ್ಸಾಹಿಸಬೇಕು. ಅವರು ಉತ್ತಮ ವಿದ್ಯಾಭ್ಯಾಸ ಪಡೆದು ನೌಕರಿ ಪಡೆದರೆ ಇಡೀ ಕುಟುಂಬ ಆರ್ಥಿಕವಾಗಿ ಸಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ನವರು ಪ್ರೇರಣಾದಾಯಕ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಳ್ಳಿಮಠ, ಆದರ್ಶ ನೂಲಿ, ಉಮೇಶ ಹಿರೇಮಠ, ವಿಜಯಕುಮಾರ್ ಶಿಂತ್ರಿ, ಮಳಿಗೆ ಮುಖ್ಯಸ್ಥ ಸವದ್ ಪಿ.ಐ., ಸಹಾಯಕ ಮಳಿಗೆ ವ್ಯವಸ್ಥಾಪಕ ಸೂರಜ್ ಅನ್ವೇಕರ, ಆನಂದ ಬುಲಬುಲೆ ಹಾಗೂ ಚೇತನ ಕಾಂಬ್ಳೆ ಇದ್ದರು.