<p><strong>ಚಿಕ್ಕೋಡಿ:</strong> ‘ಕರಗಾಂವ, ಬೆಂಡವಾಡ ಹಾಗೂ ಜೈ ಹನುಮಾನ, ಶಿವಶಕ್ತಿ ಏತ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ರಾಯಬಾಗ ಮತಕ್ಷೇತ್ರ ಹಸಿರಾಗಿಸುತ್ತೇನೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.</p>.<p>ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಬುಧವಾರ ₹60 ಲಕ್ಷ ಅನುದಾನದಲ್ಲಿ ಕರೋಶಿ-ಕುಂಗಟೋಳಿ ಮುಖ್ಯರಸ್ತೆಯಿಂದ ಕಮತೇನಹಟ್ಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಕರಗಾಂವ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಇನ್ನುಳಿದ ನೀರಾವರಿ ಯೋಜನೆಗಳಿಗೆ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ₹30 ಕೋಟಿ ಮೊತ್ತದಲ್ಲಿ ಜೈನಾಪುರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮುಕ್ತಾಯದ ಹಂತದಲ್ಲಿದೆ’ ಎಂದರು.</p>.<p>ಬಿಜೆಪಿ ಮುಖಂಡ ಮಹೇಶ ಭಾತೆ ಮಾತನಾಡಿ, ‘ಯಾದಗೂಡ, ಕರಗಾಂವ, ಬೆನ್ನಿಹಳ್ಳಿ ಹಾಗೂ ಕಮತನೇಹಟ್ಟಿ ಗ್ರಾಮದ ಜನರಿಗೆ ಈ ರಸ್ತೆಯಿಂದ ಸಾಕಷ್ಟು ಅನುಕೂಲವಿದೆ. ಇನ್ನುಳಿದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶೀಘ್ರ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.</p>.<p>ವಿಜಯ ಕೋಟಿವಾಲೆ, ಪಂಚಾಕ್ಷರಿ ಹಳಿಜೋಳೆ, ಬಾಳು ಮುಗಳಿ, ದುಂಡಯ್ಯ ಪೂಜೇರಿ, ರಾಜು ಕೊಟಗಿ, ಸುರೇಶ ಕೇಸ್ತಿ, ಕಲ್ಲಪ್ಪ ಕುಂಬಾರ, ಏಕನಾಥ ಜಡೆ, ಯುಸೂಫ ಪಟೇಲ, ಬಾಬು ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ‘ಕರಗಾಂವ, ಬೆಂಡವಾಡ ಹಾಗೂ ಜೈ ಹನುಮಾನ, ಶಿವಶಕ್ತಿ ಏತ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ರಾಯಬಾಗ ಮತಕ್ಷೇತ್ರ ಹಸಿರಾಗಿಸುತ್ತೇನೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.</p>.<p>ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಬುಧವಾರ ₹60 ಲಕ್ಷ ಅನುದಾನದಲ್ಲಿ ಕರೋಶಿ-ಕುಂಗಟೋಳಿ ಮುಖ್ಯರಸ್ತೆಯಿಂದ ಕಮತೇನಹಟ್ಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಕರಗಾಂವ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಇನ್ನುಳಿದ ನೀರಾವರಿ ಯೋಜನೆಗಳಿಗೆ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ₹30 ಕೋಟಿ ಮೊತ್ತದಲ್ಲಿ ಜೈನಾಪುರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮುಕ್ತಾಯದ ಹಂತದಲ್ಲಿದೆ’ ಎಂದರು.</p>.<p>ಬಿಜೆಪಿ ಮುಖಂಡ ಮಹೇಶ ಭಾತೆ ಮಾತನಾಡಿ, ‘ಯಾದಗೂಡ, ಕರಗಾಂವ, ಬೆನ್ನಿಹಳ್ಳಿ ಹಾಗೂ ಕಮತನೇಹಟ್ಟಿ ಗ್ರಾಮದ ಜನರಿಗೆ ಈ ರಸ್ತೆಯಿಂದ ಸಾಕಷ್ಟು ಅನುಕೂಲವಿದೆ. ಇನ್ನುಳಿದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶೀಘ್ರ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.</p>.<p>ವಿಜಯ ಕೋಟಿವಾಲೆ, ಪಂಚಾಕ್ಷರಿ ಹಳಿಜೋಳೆ, ಬಾಳು ಮುಗಳಿ, ದುಂಡಯ್ಯ ಪೂಜೇರಿ, ರಾಜು ಕೊಟಗಿ, ಸುರೇಶ ಕೇಸ್ತಿ, ಕಲ್ಲಪ್ಪ ಕುಂಬಾರ, ಏಕನಾಥ ಜಡೆ, ಯುಸೂಫ ಪಟೇಲ, ಬಾಬು ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>