<p><strong>ಸವದತ್ತಿ:</strong> ಬುದ್ದನ ಕರುಣೆ, ಗಾಂಧೀಜಿಯ ಮಾನವೀಯತೆ, ಅಂಬೇಡ್ಕರ್ರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆ ಹಾಗೂ ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಮಹಾಯೋಗಿ ವೇಮನರಲ್ಲಿ ಕಾಣಬಹುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.</p>.<p>ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ದಿ. ಜಿ.ಎಚ್. ವೆಂಕರಡ್ಡಿ ಅವರ ವೇದಿಕೆಯಲ್ಲಿ ಸವದತ್ತಿ-ಯರಗಟ್ಟಿ ತಾಲ್ಲೂಕು ‘ಮಹಾಯೋಗಿ ವೇಮನರ 614 ನೇ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. </p>.<p>15ನೇ ಶತಮಾನದಲ್ಲಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿ ಉತ್ಕೃಷ್ಟವಾದ ಸಾಹಿತ್ಯ ನೀಡಿದರು. ತಮ್ಮ ಜೀವಿತದ ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಇರಲಿಲ್ಲ. ಬಟ್ಟೆಯಿಲ್ಲದೆ ಗ್ರಾಮಗಳನ್ನು ಸುತ್ತಿ ಜನರ ನೋವು ನಲಿವುಗಳನ್ನು ಸ್ವತಃ ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವವಿದೆ. ವಾಸ್ತವಿಕ ಸಮಾಜವನ್ನು ನಿರ್ಮಿಸುವ ಕಳಕಳಿ ಅವರ ಕಾವ್ಯದಲ್ಲಿದೆ ಎಂದರು.</p>.<p>ಸಮಾಜದಲ್ಲಿ ನಿತ್ಯದ ಜಾತಿ ಸಂಘರ್ಷ, ಮೇಲು ಕೀಳುಗಳೆಂಬ ತಾರತಮ್ಯ, ನೋವು ಕ್ರೌರ್ಯಗಳಿಗೆ ವೇಮನರ ಸಾಹಿತ್ಯದಲ್ಲಿ ಉತ್ತರವಿದೆ. ವೇಮನರ ವಿಚಾರವನ್ನು ಎಲ್ಲರೂ ತಿಳಿಯಬೇಕು. ಕನ್ನಡದಲ್ಲಿ ಸರ್ವಜ್ಞರಂತೆ, ತೆಲುಗಿನಲ್ಲಿ ವೇಮನರು ಹೆಚ್ಚಿನ ಪ್ರಖ್ಯಾತಿಗಳಿಸಿದ್ದಾರೆ. ಅಪರೂಪದ ವ್ಯಕ್ತಿಗಳಲ್ಲಿ ವೇಮನರು ಅಗ್ರಗಣ್ಯರು. ಭೂಮಿ ಮೇಲೆ ಎಲ್ಲರ ಹೆಸರು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಆದರೆ ಯೋಗ ಸಾಧನೆ, ಸಮಾಜಕ್ಕಾಗಿ ಒಳಿತು ಮಾಡಿದ ಮಹಾನ್ ವ್ಯಕ್ತಿಗಳು ಮಾತ್ರ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೇಳಿದರು.</p>.<p>ರಡ್ಡಿ ಸಮಾಜದ ಹಿರಿಯರು ಮತ್ತು ಮಾಜಿ ಶಾಸಕ ಆರ್.ವಿ.ಪಾಟೀಲ ಮಾತನಾಡಿ, ‘ವೇಮನರು ಮೌಢ್ಯ, ಅಂಧ, ಶ್ರದ್ಧೆ, ಜಾತಿ, ಗುಣ, ನಡತೆ, ದೇವರು, ಮೂರ್ತಿಪೂಜೆ, ಮಾನವೀಯ ಮೌಲ್ಯ, ಜೀವನ ಪ್ರೀತಿ, ಅರಿಷಡ್ವರ್ಗಗಳು, ಸುಳ್ಳು, ಮೋಸ, ವಂಚನೆ ಮುಂತಾದ ಗಹನವಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.</p>.<p>ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಕಲರೂ ಬದ್ಧರಿದ್ದೇವೆ. ಜೊತೆಗೆ ಶಾಸಕನಾಗಿ ಕಳಸಾ ಬಂಡೂರಿ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡುವುದಕ್ಕಾಗಿ ಶ್ರಮಿಸುತ್ತೇನೆ ಎಂದರು.</p>.<p>ರಡ್ಡಿ ಗುರುಪೀಠದ ವೇಮನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿ.ಬಿ. ಒಂಟಗೋಡಿ, ಚಂದ್ರರಡ್ಡಿ ಹೂಲಿ, ಶ್ರೀನಿವಾಸ ಉದಗಟ್ಟಿ, ರೇಣುಕಾ ಅಂಬೋಜಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕಿ ಉಮಾ ಸಾಲಿಗೌಡ್ರ, ಬೆಂಗಳೂರಿನ ಮಾಹಿತಿ ಹಕ್ಕು ಆಯೋಗದ ಕಮೀಷನರ ಪ್ರಕಾಶ ಚನ್ನಾಳ, ಬಿ.ಎನ್. ಹೊಸೂರ, ಸೋಮರಡ್ಡಿ ನಿಂಗರಡ್ಡಿ, ಜಗದೀಶ ಹನಸಿ, ಶಿವರಡ್ಡಿ ಜಗಾಪೂರ, ಸಂಜೀವ ಜಾಲಿಕೊಪ್ಪ, ಲಕ್ಷ್ಮಿ ಹೂಲಿ ಹಾಗೂ ಪ್ರಮುಖರು ಇದ್ದರು.</p>.<div><blockquote>ರಡ್ಡಿ ಸಮುದಾಯಕ್ಕೆ 10 ಗುಂಟೆ ಜಾಗೆ ಸದ್ಯ ₹1 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಜೊತೆಗೆ ಮುಂಬರುವ ವರ್ಷ ಹೆಚ್ಚುವರಿ ₹1 ಕೋಟಿ ಅನುದಾನ ನೀಡಲಾಗುವದು</blockquote><span class="attribution"> -ವಿಶ್ವಾಸ್ ವೈದ್ಯ ಶಾಸಕ</span></div>
<p><strong>ಸವದತ್ತಿ:</strong> ಬುದ್ದನ ಕರುಣೆ, ಗಾಂಧೀಜಿಯ ಮಾನವೀಯತೆ, ಅಂಬೇಡ್ಕರ್ರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆ ಹಾಗೂ ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಮಹಾಯೋಗಿ ವೇಮನರಲ್ಲಿ ಕಾಣಬಹುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.</p>.<p>ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ದಿ. ಜಿ.ಎಚ್. ವೆಂಕರಡ್ಡಿ ಅವರ ವೇದಿಕೆಯಲ್ಲಿ ಸವದತ್ತಿ-ಯರಗಟ್ಟಿ ತಾಲ್ಲೂಕು ‘ಮಹಾಯೋಗಿ ವೇಮನರ 614 ನೇ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. </p>.<p>15ನೇ ಶತಮಾನದಲ್ಲಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿ ಉತ್ಕೃಷ್ಟವಾದ ಸಾಹಿತ್ಯ ನೀಡಿದರು. ತಮ್ಮ ಜೀವಿತದ ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಇರಲಿಲ್ಲ. ಬಟ್ಟೆಯಿಲ್ಲದೆ ಗ್ರಾಮಗಳನ್ನು ಸುತ್ತಿ ಜನರ ನೋವು ನಲಿವುಗಳನ್ನು ಸ್ವತಃ ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವವಿದೆ. ವಾಸ್ತವಿಕ ಸಮಾಜವನ್ನು ನಿರ್ಮಿಸುವ ಕಳಕಳಿ ಅವರ ಕಾವ್ಯದಲ್ಲಿದೆ ಎಂದರು.</p>.<p>ಸಮಾಜದಲ್ಲಿ ನಿತ್ಯದ ಜಾತಿ ಸಂಘರ್ಷ, ಮೇಲು ಕೀಳುಗಳೆಂಬ ತಾರತಮ್ಯ, ನೋವು ಕ್ರೌರ್ಯಗಳಿಗೆ ವೇಮನರ ಸಾಹಿತ್ಯದಲ್ಲಿ ಉತ್ತರವಿದೆ. ವೇಮನರ ವಿಚಾರವನ್ನು ಎಲ್ಲರೂ ತಿಳಿಯಬೇಕು. ಕನ್ನಡದಲ್ಲಿ ಸರ್ವಜ್ಞರಂತೆ, ತೆಲುಗಿನಲ್ಲಿ ವೇಮನರು ಹೆಚ್ಚಿನ ಪ್ರಖ್ಯಾತಿಗಳಿಸಿದ್ದಾರೆ. ಅಪರೂಪದ ವ್ಯಕ್ತಿಗಳಲ್ಲಿ ವೇಮನರು ಅಗ್ರಗಣ್ಯರು. ಭೂಮಿ ಮೇಲೆ ಎಲ್ಲರ ಹೆಸರು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಆದರೆ ಯೋಗ ಸಾಧನೆ, ಸಮಾಜಕ್ಕಾಗಿ ಒಳಿತು ಮಾಡಿದ ಮಹಾನ್ ವ್ಯಕ್ತಿಗಳು ಮಾತ್ರ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೇಳಿದರು.</p>.<p>ರಡ್ಡಿ ಸಮಾಜದ ಹಿರಿಯರು ಮತ್ತು ಮಾಜಿ ಶಾಸಕ ಆರ್.ವಿ.ಪಾಟೀಲ ಮಾತನಾಡಿ, ‘ವೇಮನರು ಮೌಢ್ಯ, ಅಂಧ, ಶ್ರದ್ಧೆ, ಜಾತಿ, ಗುಣ, ನಡತೆ, ದೇವರು, ಮೂರ್ತಿಪೂಜೆ, ಮಾನವೀಯ ಮೌಲ್ಯ, ಜೀವನ ಪ್ರೀತಿ, ಅರಿಷಡ್ವರ್ಗಗಳು, ಸುಳ್ಳು, ಮೋಸ, ವಂಚನೆ ಮುಂತಾದ ಗಹನವಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.</p>.<p>ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಕಲರೂ ಬದ್ಧರಿದ್ದೇವೆ. ಜೊತೆಗೆ ಶಾಸಕನಾಗಿ ಕಳಸಾ ಬಂಡೂರಿ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡುವುದಕ್ಕಾಗಿ ಶ್ರಮಿಸುತ್ತೇನೆ ಎಂದರು.</p>.<p>ರಡ್ಡಿ ಗುರುಪೀಠದ ವೇಮನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿ.ಬಿ. ಒಂಟಗೋಡಿ, ಚಂದ್ರರಡ್ಡಿ ಹೂಲಿ, ಶ್ರೀನಿವಾಸ ಉದಗಟ್ಟಿ, ರೇಣುಕಾ ಅಂಬೋಜಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕಿ ಉಮಾ ಸಾಲಿಗೌಡ್ರ, ಬೆಂಗಳೂರಿನ ಮಾಹಿತಿ ಹಕ್ಕು ಆಯೋಗದ ಕಮೀಷನರ ಪ್ರಕಾಶ ಚನ್ನಾಳ, ಬಿ.ಎನ್. ಹೊಸೂರ, ಸೋಮರಡ್ಡಿ ನಿಂಗರಡ್ಡಿ, ಜಗದೀಶ ಹನಸಿ, ಶಿವರಡ್ಡಿ ಜಗಾಪೂರ, ಸಂಜೀವ ಜಾಲಿಕೊಪ್ಪ, ಲಕ್ಷ್ಮಿ ಹೂಲಿ ಹಾಗೂ ಪ್ರಮುಖರು ಇದ್ದರು.</p>.<div><blockquote>ರಡ್ಡಿ ಸಮುದಾಯಕ್ಕೆ 10 ಗುಂಟೆ ಜಾಗೆ ಸದ್ಯ ₹1 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಜೊತೆಗೆ ಮುಂಬರುವ ವರ್ಷ ಹೆಚ್ಚುವರಿ ₹1 ಕೋಟಿ ಅನುದಾನ ನೀಡಲಾಗುವದು</blockquote><span class="attribution"> -ವಿಶ್ವಾಸ್ ವೈದ್ಯ ಶಾಸಕ</span></div>