<p><strong>ಮೂಡಲಗಿ:</strong> ‘ಮೂಡಲಗಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗುವುದರಿಂದ ತಾಲ್ಲೂಕಿನ ಜನರಿಗೆ ಸುಗಮವಾಗಿ ನ್ಯಾಯ ದೊರಕಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಕರ್ನಾಟಕದ ಹೈಕೋರ್ಟ್ ಹಾಗೂ ಬೆಳಗಾವಿಯ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶೆ ಕೆ.ಎಸ್.ಮುದಗಲ ಹೇಳಿದರು.</p>.<p>ಬೆಳಗಾವಿಯ ನ್ಯಾಯಾಂಗ ಇಲಾಖೆ ಹಾಗೂ ಮೂಡಲಗಿಯ ವಕೀಲರ ಸಂಘದ ಸಹಯೋಗದಲ್ಲಿ ಮೂಡಲಗಿಯಲ್ಲಿ ನ್ಯಾಯಾಲಯದ ಉದ್ಘಾಟನೆಯನ್ನು ಸೋಮವಾರ ವರ್ಚವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಉತ್ತಮ ಸಹಕಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯ’ ಎಂದರು.</p>.<p>‘ಕೇವಲ ಕಾನೂನು ಪದವಿ ಪಡೆದುಕೊಂಡು ವಕೀಲ ವೃತ್ತಿಗೆ ಬಂದರೆ ಸಾಲದು, ಕಾನೂನು ಬಗ್ಗೆ ನಿರಂತರವಾದ ಅಧ್ಯಯನ ಹಾಗೂ ಹಿರಿಯ ಅನುಭವಿ ವಕೀಲರ ಮಾರ್ಗದರ್ಶದಲ್ಲಿ ವ್ಯಾಜ್ಯ ನಡೆಸುವ ಮೂಲಕ ಕಾನೂನು ಮತ್ತು ನ್ಯಾಯಾಲಯದ ಗೌರವ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.</p>.<p> ಬೆಳಗಾವಿಯ ನ್ಯಾಯಾಧೀಶ ಮಂಜುನಾಥ ನಾಯಕ ಮಾತನಾಡಿ, ‘ಮೂಡಲಗಿಯಲ್ಲಿ ನ್ಯಾಯಾಲಯ ಪ್ರಾರಂಭವಾಗುವಲ್ಲಿ ವಿವಿಧ ಅವಧಿಯ ವಕೀಲರ ಸಂಘದ ಪದಾಧಿಕಾರಿಗಳ ಪರಿಶ್ರಮ ಶ್ಲಾಘನೀಯ’ ಎಂದರು.</p>.<p> ಮೂಡಲಗಿಯ ನ್ಯಾಯಾಧೀಶೆ ಶಾಂತಮ್ಮಾ ಮಲ್ಲಿಕಾರ್ಜುನ ಪಿ.ವೇದಿಕೆಯಲ್ಲಿದ್ದರು.</p>.<p>ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಭಾಗೋಜಿ, ಉಪಾಧ್ಯಕ್ಷ ಎಲ್.ಬಿ. ವಡೆಯರ, ಪದಾಧಿಕಾರಿಗಳಾದ ಎಲ್.ಎಸ್. ಯಡ್ರಾಂವಿ, ಎಚ್.ವೈ. ಸಣ್ಣಕ್ಕಿ, ಜ್ಯೋತಿ ಕುಡತೆ ಇದ್ದರು.</p>.<p>ಹಿರಿಯ ವಕೀಲ ಉದಯ ಆರ್. ಜೋಕಿ ಪ್ರಾಸ್ತಾವಿಕ ಮಾತನಾಡಿದರು, ವಕೀಲ ಆರ್.ಎಸ್. ತೋಳಮರಡಿ ಸ್ವಾಗತಿಸಿದರು, ವಕೀಲ ಲಕ್ಷ್ಮಣ ಅಡಿಹುಡಿ ನಿರೂಪಿಸಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಕೌಜಲಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ‘ಮೂಡಲಗಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗುವುದರಿಂದ ತಾಲ್ಲೂಕಿನ ಜನರಿಗೆ ಸುಗಮವಾಗಿ ನ್ಯಾಯ ದೊರಕಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಕರ್ನಾಟಕದ ಹೈಕೋರ್ಟ್ ಹಾಗೂ ಬೆಳಗಾವಿಯ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶೆ ಕೆ.ಎಸ್.ಮುದಗಲ ಹೇಳಿದರು.</p>.<p>ಬೆಳಗಾವಿಯ ನ್ಯಾಯಾಂಗ ಇಲಾಖೆ ಹಾಗೂ ಮೂಡಲಗಿಯ ವಕೀಲರ ಸಂಘದ ಸಹಯೋಗದಲ್ಲಿ ಮೂಡಲಗಿಯಲ್ಲಿ ನ್ಯಾಯಾಲಯದ ಉದ್ಘಾಟನೆಯನ್ನು ಸೋಮವಾರ ವರ್ಚವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಉತ್ತಮ ಸಹಕಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯ’ ಎಂದರು.</p>.<p>‘ಕೇವಲ ಕಾನೂನು ಪದವಿ ಪಡೆದುಕೊಂಡು ವಕೀಲ ವೃತ್ತಿಗೆ ಬಂದರೆ ಸಾಲದು, ಕಾನೂನು ಬಗ್ಗೆ ನಿರಂತರವಾದ ಅಧ್ಯಯನ ಹಾಗೂ ಹಿರಿಯ ಅನುಭವಿ ವಕೀಲರ ಮಾರ್ಗದರ್ಶದಲ್ಲಿ ವ್ಯಾಜ್ಯ ನಡೆಸುವ ಮೂಲಕ ಕಾನೂನು ಮತ್ತು ನ್ಯಾಯಾಲಯದ ಗೌರವ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.</p>.<p> ಬೆಳಗಾವಿಯ ನ್ಯಾಯಾಧೀಶ ಮಂಜುನಾಥ ನಾಯಕ ಮಾತನಾಡಿ, ‘ಮೂಡಲಗಿಯಲ್ಲಿ ನ್ಯಾಯಾಲಯ ಪ್ರಾರಂಭವಾಗುವಲ್ಲಿ ವಿವಿಧ ಅವಧಿಯ ವಕೀಲರ ಸಂಘದ ಪದಾಧಿಕಾರಿಗಳ ಪರಿಶ್ರಮ ಶ್ಲಾಘನೀಯ’ ಎಂದರು.</p>.<p> ಮೂಡಲಗಿಯ ನ್ಯಾಯಾಧೀಶೆ ಶಾಂತಮ್ಮಾ ಮಲ್ಲಿಕಾರ್ಜುನ ಪಿ.ವೇದಿಕೆಯಲ್ಲಿದ್ದರು.</p>.<p>ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಭಾಗೋಜಿ, ಉಪಾಧ್ಯಕ್ಷ ಎಲ್.ಬಿ. ವಡೆಯರ, ಪದಾಧಿಕಾರಿಗಳಾದ ಎಲ್.ಎಸ್. ಯಡ್ರಾಂವಿ, ಎಚ್.ವೈ. ಸಣ್ಣಕ್ಕಿ, ಜ್ಯೋತಿ ಕುಡತೆ ಇದ್ದರು.</p>.<p>ಹಿರಿಯ ವಕೀಲ ಉದಯ ಆರ್. ಜೋಕಿ ಪ್ರಾಸ್ತಾವಿಕ ಮಾತನಾಡಿದರು, ವಕೀಲ ಆರ್.ಎಸ್. ತೋಳಮರಡಿ ಸ್ವಾಗತಿಸಿದರು, ವಕೀಲ ಲಕ್ಷ್ಮಣ ಅಡಿಹುಡಿ ನಿರೂಪಿಸಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಕೌಜಲಗಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>