‘ಅವರು ಜಾನಪದ ಗಾದೆ, ಒಡಪು, ಗ್ರಾಮದೇವತೆಗಳ ಕುರಿತು ಅಪಾರ ಸಂಶೋಧನೆ ಮಾಡಿದ್ದರು. ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ತಮ್ಮ ‘ಕಾಲಗತಿ’ ಪ್ರಕಾಶನದ ಮೂಲಕ ಶಂಬಾ ಜೋಶಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಕನಕದಾಸ, ವಚನ ಸಾಹಿತ್ಯ ಕುರಿತು ಅಧಿಕೃತ ಮಾಹಿತಿ ಒಳಗೊಂಡ ಮಹತ್ವದ ಕೃತಿಗಳನ್ನು ಪ್ರಕಟಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಬಹಳಷ್ಟು ಪಾಂಡಿತ್ಯ ಹೊಂದಿದ್ದರೂ ಸರಳತೆಗೆ ಹೆಸರಾಗಿದ್ದರು’ ಎಂದು ಸ್ಮರಿಸಿದರು.