<p><strong>ಅಥಣಿ:</strong> ‘ಗಿಡ, ಮರಗಳನ್ನು ಬೆಳೆಸುವುದರಿಂದ ತಾಪಮಾನ ಪ್ರಮಾಣ ತಗ್ಗಿಸಬಹುದಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ತಿಳಿಸಿದರು.</p>.<p>ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಎಸ್ಎಂಎಸ್ ಕಾಲೇಜಿನಲ್ಲಿ ಗುರುವಾರ ‘ಇಕೊ ಕ್ಲಬ್’ನಿಂದ ಹಮ್ಮಿಕೊಂಡಿದ್ದ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಓಝೋನ್ ಪದರ ರಕ್ಷಿಸುವ ಜವಾಬ್ದಾರಿ ಎಲ್ಲರದಾಗಿದೆ. ಆದರೆ, ಅದನ್ನು ಅರಿತಿಲ್ಲದಿರುವುದು ವಿಷಾದನೀಯ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಮಾತನಾಡಿ, ‘ವಿಷಾನಿಲದಿಂದಾಗಿ ಓಝೋನ್ ಪದರ ಕ್ಷೀಣಿಸುತ್ತಿದೆ’ ಎಂದು ತಿಳಿಸಿದರು.</p>.<p>ಕಾಲೇಜು ಒಕ್ಕೂಟದ ಉಪಾಧ್ಯಕ್ಷರಾದ ಡಾ.ಕೆ.ಆರ್. ಸಿದ್ದಗಂಗಮ್ಮ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್.ಕೆ. ಸಜ್ಜನ ಇದ್ದರು.</p>.<p>ಎಂ.ಎನ್. ಕುಳ್ಳೋಳ್ಳಿ ಪರಿಚಯಿಸಿದರು. ಶಾರದಾ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಫೂರ್ತಿ ಅಥಣಿ ನಿರೂಪಿಸಿದರು. ಪ್ರೀತಿ ಪಾಟೀಲ ವಂದಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ಗಿಡ, ಮರಗಳನ್ನು ಬೆಳೆಸುವುದರಿಂದ ತಾಪಮಾನ ಪ್ರಮಾಣ ತಗ್ಗಿಸಬಹುದಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ತಿಳಿಸಿದರು.</p>.<p>ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಎಸ್ಎಂಎಸ್ ಕಾಲೇಜಿನಲ್ಲಿ ಗುರುವಾರ ‘ಇಕೊ ಕ್ಲಬ್’ನಿಂದ ಹಮ್ಮಿಕೊಂಡಿದ್ದ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಓಝೋನ್ ಪದರ ರಕ್ಷಿಸುವ ಜವಾಬ್ದಾರಿ ಎಲ್ಲರದಾಗಿದೆ. ಆದರೆ, ಅದನ್ನು ಅರಿತಿಲ್ಲದಿರುವುದು ವಿಷಾದನೀಯ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಮಾತನಾಡಿ, ‘ವಿಷಾನಿಲದಿಂದಾಗಿ ಓಝೋನ್ ಪದರ ಕ್ಷೀಣಿಸುತ್ತಿದೆ’ ಎಂದು ತಿಳಿಸಿದರು.</p>.<p>ಕಾಲೇಜು ಒಕ್ಕೂಟದ ಉಪಾಧ್ಯಕ್ಷರಾದ ಡಾ.ಕೆ.ಆರ್. ಸಿದ್ದಗಂಗಮ್ಮ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್.ಕೆ. ಸಜ್ಜನ ಇದ್ದರು.</p>.<p>ಎಂ.ಎನ್. ಕುಳ್ಳೋಳ್ಳಿ ಪರಿಚಯಿಸಿದರು. ಶಾರದಾ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಫೂರ್ತಿ ಅಥಣಿ ನಿರೂಪಿಸಿದರು. ಪ್ರೀತಿ ಪಾಟೀಲ ವಂದಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>